ಬಿಜೆಪಿಯವರು ನನ್ನ ಮೇಲೆ ಯಾವ ಕೇಸ್ ಹಾಕಿದರೂ ಎದುರಿಸುತ್ತೇನೆ: ಡಿಕೆಶಿ

Advertisement

ಮೈಸೂರು: ಬಿಜೆಪಿಯವರು ನನ್ನ ಮೇಲೆ ಯಾವ ಕೇಸ್ ಹಾಕಿದರೂ ಎದುರಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ಧಾರೆ.

ಮೈಸೂರಿನಲ್ಲಿ ಮಾತನಾಡಿದ ಡಿಕೆ ಶಿವಕುಮಾರ್ ಅವರು ನನಗೆ ಕೆಲವರು ಪೋನ್ ಮಾಡಿ ರೋಪ್ ಹಾಕಿದ್ದಾರೆ. ಬಿಜೆಪಿಯವರು ಯಾವುದೇ ಕೇಸ್ ಬೇಕಾದರೂ ಹಾಕಲಿ, ಯಾವ ಕೇಸ್ ಹಾಕಿದ್ರೂ ನಾನು ಎದುರಿಸಲು ಸಿದ್ಧನಿದ್ದೇನೆ. ನನಗೆ ಕೆಲವು ಅಧಿಕಾರಿಗಳ ಫೋನ್ ಮಾಡಿ ಹೇಳಿದ್ದಾರೆ. ಯಾರು ಏನೇ ಮಾಡಿದರೂ ನಾನು ಎದುರಿಸಲು ಸಿದ್ಧನಿದ್ದೇನೆ ಎಂದಿದ್ಧಾರೆ.

ಬಳ್ಳಾರಿಯಲ್ಲಿ ಭಾರತ್ ಜೋಡೋ ಸಮಾವೇಶ ಮಾಡುತ್ತೇವೆ. ಮೈಸೂರು ಭಾಗದಲ್ಲಿ‌ ಭಾರತ್ ಜೋಡೋ ಯಾತ್ರೆ ನಡೆಯಲಿದೆ. ಆ ಕಾರಣದಿಂದ ಸಿದ್ಧತೆ ಕಾರ್ಯ ಪರಿಶೀಲಿಸುವೆ, ಯಾರು ಏನು ಮಾಡಿದರೂ ಯಾವುದನ್ನೂ ತಡೆಯಲಾಗದು ಎಂದು ಹೇಳಿದ್ಧಾರೆ.