ಬಿಜೆಪಿ ಎಂದರೆ ವಿಕಾಸ: ಕಾಂಗ್ರೆಸ್ ಎಂದರೆ ವಿನಾಶ

Advertisement

ವಿಜಯಪುರ: ಬಿಜೆಪಿ ಎಂದರೆ ವಿಕಾಸ, ಕಾಂಗ್ರೆಸ್ ಎಂದರೆ ವಿನಾಶ, ಹೀಗಾಗಿ ಕಾಂಗ್ರೆಸ್‌ಗೆ ಆರಾಮ ಕರುಣಿಸಿ, ಬಿಜೆಪಿಗೆ ಕೆಲಸ ನೀಡಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ ನಡ್ಡಾ ಹೇಳಿದರು.
ಸಿಂದಗಿಯಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪಾರದರ್ಶಕತೆ, ವಿಕಾಸ ಎಂದರೆ ಬಿಜೆಪಿ, ಭ್ರಷ್ಟಾಚಾರ, ಕಮೀಷನ್ ಎಂದರೆ ಕಾಂಗ್ರೆಸ್. ಆ ಪಕ್ಷದ ಅಜೆಂಡಾ ಕೇವಲ ಕುರ್ಚಿ, ಕುರ್ಚಿ, ಕುರ್ಚಿ…. ಹೀಗಾಗಿ ಕಾಂಗ್ರೆಸ್‌ನವರಿಗೆ ಆರಾಮ ಕರುಣಿಸಿ, ಕೆಲಸ ಮಾಡುವ ಬಿಜೆಪಿಯವರಿಗೆ ಮತ ನೀಡಿ ಎಂದರು.