ಬಿರುಸಿನ ಮತದಾನ: ಮತ ಎಣಿಕೆಗೆ ತಡೆ

Advertisement

ಬಾಗಲಕೋಟೆ: ರಾಜಕೀಯ ಬಣ್ಣ ಪಡೆದುಕೊಂಡಿರುವ ಸಹಕಾರಿ ಸಂಘದ ಚುನಾವಣೆಗೆ ಎಲ್ಲಿಲ್ಲದ ಕಸರತ್ತು ನಡೆಯುವಲ್ಲಿ ಕಾರಣವಾಗಿದ್ದು, ಬನಹಟ್ಟಿ, ಆಸಂಗಿ ಹಾಗು ಹನಗಂಡಿಯ ಪಿಕೆಪಿಎಸ್ ಸಂಘದ ಚುನಾವಣೆಯ ಮತದಾನವು ಇಂದು ಬಿರುಸಿನಿಂದ ಸಾಗಿತು.
ಮೂರು ಪ್ರದೇಶಗಳಲ್ಲಿ ರಾಜಕೀಯ ಚುನಾವಣೆಯಷ್ಟೇ ವಾತಾವರಣ ಸೃಷ್ಟಿಯಾಗಿ ಒಂದೇ ಕುಟುಂಬದ ಹಲವಾರು ಸದಸ್ಯರು ಕಣದಲ್ಲಿದ್ದರೂ ಎರಡು ಬಣಗಳಾಗಿ ವಿಂಗಡಣೆಯಾಗಿ ವಿರೋಧಿಗಳಾಗಿ ಕಾಣುವಲ್ಲಿ ಕಾರಣವಾಗಿತ್ತು.
ಫಲಿತಾಂಶ ಮುಂದೂಡಿಕೆ
ಚುನಾವಣೆಗೆ ಸಾಮಾನ್ಯ ಸಭೆಗೆ ಹಾಜರಾಗದವರು ಮತದಾನ ಮಾಡುವ ಹಕ್ಕಿಲ್ಲವೆಂಬ ಕಾಯ್ದೆಗೆ ನ್ಯಾಯಾಲಯ ಮೊರೆ ಹೋಗಿದ್ದಜನರು ಕೊನೆಗೂ ಮತದಾನ ಮಾಡುವ ಅವಕಾಶ ದೊರಕಿತು. ಆದರೆ ಈ ಚುನಾವಣೆಗಳ ಫಲಿತಾಂಶವು ರವಿವಾರ ಸಂಜೆಯೇ ನಡೆಯಬೇಕಿತ್ತು. ನ್ಯಾಯಾಲಯದ ಆದೇಶದ ಮೇರೆಗೆ ಮುಂದೂಡಲಾಗಿದ್ದು, ಅಧಿಕೃತ ಆದೇಶದ ನಂತರ ಮತ ಎಣಿಕೆಗೆ ಅವಕಾಶವಿದೆ.