ಬೆಂಗಳೂರಿನಲ್ಲಿ ಇಂದು ೭೫ನೇ ಸೇನಾ ದಿನ ಆಚರಣೆ

ತಾಲಿಮ
Advertisement

ಬೆಂಗಳೂರು: ಇದೇ ಪ್ರಥಮ ಬಾರಿ ರಾಷ್ಟ್ರ ರಾಜಧಾನಿ ನವದೆಹಲಿಯಿಂದ ಹೊರಗೆ ನಡೆದ ಸೇನಾ ದಿನಾಚರಣೆ ನಡೆಯುತ್ತಿದ್ದು. ದೇಶದ ಎಲ್ಲ ಪ್ರಮುಖ ಸ್ಥಳಗಳಲ್ಲಿ ಮಹತ್ವದ ರಾಷ್ಟ್ರೀಯ ಕಾರ್ಯಕ್ರಮಗಳನ್ನು ಆಯೋಜಿಸಲು ಕೇಂದ್ರ ಸರ್ಕಾರ ಸೂಚಿಸಿದ್ದರಿಂದ ಈ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು. ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಯುದ್ಧ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿ ಸೇನಾ ತುಕಡಿಗಳ ಪಥಸಂಚಲನ ವೀಕ್ಷಿಸಿದರು.
ಪ್ರತಿ ವರ್ಷ ಭಾರತೀಯ ಸೇನಾ ದಿನಾಚರಣೆಯನ್ನು ಜನವರಿ 15ರಂದು ಆಚರಿಸಲಾಗುತ್ತದೆ. ಫೀಲ್ಡ್ ಮಾರ್ಷಲ್ ಕೊಡಂದೇರ ಎಂ ಕಾರ್ಯಪ್ಪನವರು ಭಾರತೀಯ ಸೇನೆಯ ಪ್ರಥಮ ಭಾರತೀಯ ಮಹಾದಂಡನಾಯಕರಾಗಿ ಕೊನೆಯ ಬ್ರಿಟಿಷ್ ಮಹಾದಂಡನಾಯಕ ಜನರಲ್ ಫ್ರಾನ್ಸಿಸ್ ಬುಚರ್ ಅವರಿಂದ ಜನವರಿ 15, 1949ರಂದು ಅಧಿಕಾರ ಸ್ವೀಕರಿಸಿದರು. ಆ ಸ್ಮರಣೆಗಾಗಿ ಪ್ರತಿ ವರ್ಷವೂ ಈ ದಿನವನ್ನು ಆಚರಿಸಲಾಗುತ್ತದೆ.