ಭೀಕರ ಅಪಘಾತ: ಓರ್ವ ಯುವಕ ಸಾವು

Advertisement

ಬೆಳಗಾವಿ: ಮೂಡಲಗಿ ತಾಲೂಕಿನ ಗುರ್ಲಾಪೂರ ಬಳಿಯ ನಿಪ್ಪಾಣಿ-ಮೂಧೋಳ ರಾಜ್ಯ ಹೆದ್ದರಿಯಲ್ಲಿ ಶುಕ್ರವಾರ ಸಂಜೆ ದ್ವಿಚಕ್ರ ಮತ್ತು ಕಾರ್ ಮಧ್ಯೆ ನಡುವೆ ಭೀಕರ ಅಪಘಾತ ಸ್ಥಳದಲ್ಲೇ ಓರ್ವ ಯುವಕ ಸಾವು, ಚಿಂತಾ ಜನಕ ಸ್ಥಿತಿಯಲ್ಲಿರುವನ್ನು ಯುವಕನನ್ನು ಮೂಡಲಗಿ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 
ರಸ್ತೆ ಅಪಘಾತದಲ್ಲಿ ರಬಕವಿ ಬನಹಟ್ಟಿ ತಾಲೂಕಿನ ಹೆಸರು ಗ್ರಾಮ ಕೆಸರಗೋಪ್ಪ ಗ್ರಾಮದ ಯುವಕ
ದ್ವಿಚಕ್ರ ಸವಾರ ಬಸವರಾಜ ಶ್ರೀಶೈಲ್ ಸಸಾಲಟ್ಟಿ (೧೮), ಶಿಕ್ಷಣಕ್ಕಾಗಿ ರಾಯಬಾಗ ತಾಲೂಕಿನ ಕಂಕಣವಾಡಿ ಗ್ರಾಮದ ದೊಡ್ಡಮ್ಮನ ಮನೆಯಲ್ಲಿ ವಾಸಗಿದ್ದನು.  ಚಿಂತಾ ಜನಕ ಸ್ಥಿತಿಯಲ್ಲಿ ಇರುವ ಸಂದೀಪ ಇಂಗಳಗಾವಿ (೧೮) ರಾಯಬಾಗ ತಾಲೂಕಿನ ಸವಸುದ್ದಿ ಗ್ರಾಮದ ಯುವಕ ಎಂದು ಗುರುತಿಸಲಾಗಿದೆ. ಇಬ್ಬರು ಮೂಡಲಗಿ ಪಟ್ಟಣದ ಸಾಯಿ ಕಾಲೇಜದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಾಗಿದ್ದು, ತಮ್ಮ ಶಿಕ್ಷಣದ ದಾಖಲಾತಿ ಪಡೆಯಲು ಮೂಡಲಗಿಗೆ ತೆರಳಿ, ಮರಳಿ ಮನೆಗೆ ಹೋಗುವಾಗ ನಡೆದ ಘಟನೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಮೂಡಲಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.