ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ

ಮಂಗಳೂರು ನೈತಿಕಗಿರಿ
Advertisement

ಮಂಗಳೂರು : ಮಂಗಳೂರು ಕೊಟ್ಟಾರದಲ್ಲಿ ತಡರಾತ್ರಿ ಇಬ್ಬರು ಯುವತಿಯರು ಅನ್ಯಕೋಮಿನ ಯುವಕರೊಂದಿಗೆ ಸುತ್ತಾಡುತ್ತಿರುವ ಮಾಹಿತಿ ಪಡೆದ ಭಜರಂಗದಳ ಕಾರ್ಯಕರ್ತರು ಅವರನ್ನು ತಡೆದು ಹಲ್ಲೆಗೆ ಮುಂದಾಗಿದ್ದಾರೆ. ಹೋಟೆಲ್​ಗೆ ಊಟಕ್ಕೆ ಬಂದಿರುವುದಾಗಿ ಯುವಕ, ಯುವತಿಯರು ತಿಳಿಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ, ಮಧ್ಯರಾತ್ರಿ ಯಾವ ಹೋಟೆಲ್ ಇದೆ ಎಂದು ಪ್ರಶ್ನಿಸಿ ಭಜರಂಗ ದಳ ಕಾರ್ಯಕರ್ತರು ಹಲ್ಲೆಗೆ ಯತ್ನಿಸಿದ್ದರು. ಉರ್ವ ಠಾಣಾ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು ಬಳಿಕ ಪೊಲೀಸ್ ಠಾಣೆಗೆ ತೆರಳಿ ಅಲ್ಲಿಂದ ಹೊರಟ ಜೋಡಿ,ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ‌ನಡೆದ ಘಟನೆ.