ಮರಳಿ ಸಿಕ್ಕ ಚಿನ್ನದ ತಾಳಿ: ಕುಟುಂಬಸ್ಥರ ಮೊಗದಲ್ಲಿ ಮಂದಹಾಸ

Advertisement

ಇಳಕಲ್: ಸಾರಿಗೆ ಸಂಸ್ಥೆಯ ಬಸ್ ಒಂದರಲ್ಲಿ ಕಳೆದುಕೊಂಡಿದ್ದ ಚಿನ್ನದ ತಾಳಿಯ ಸರ ಮರಳಿ ವಿಜಯದಶಮಿಯ ಶುಭ ದಿನದಂದು ವಾರಸುದಾರರಿಗೆ ಮರಳಿ ದೊರೆತಿದೆ.
ವಾಸಂತಿ ಹಿರೇಮಠ ಎಂಬ ಮಹಿಳೆ ಸೋಮವಾರದಂದು ಶಿರಡಿ ಇಳಕಲ್ ಬಸ್ ಮೂಲಕ ನಗರಕ್ಕೆ ವಾಪಸ್ಸಾಗಿದ್ದರು. ಆದರೆ ದುರ್ದೈವವಶಾತ ಅವರ ಕೊರಳಲ್ಲಿನ ಚಿನ್ನದ ತಾಳಿ ಮಾಯವಾಗಿತ್ತು. ಕೂಡಲೇ ಬಸ್ ನಿಲ್ದಾಣಕ್ಕೆ ಬಂದು ಸಾರಿಗೆ ನಿಯಂತ್ರಕ ಎನ್ ಬಿ ಬಾದವಾಡಗಿ ಅವರನ್ನು ಭೇಟಿ ಮಾಡಿದ ಮಹಿಳೆ ಸರ ಕಳೆದುಹೋದ ಬಗ್ಗೆ ತಿಳಿಸಿದ್ದಾರೆ ಸಾರಿಗೆ ನಿಯಂತ್ರಕರೂ ಸಹ ಕಾರ್ಯತತ್ಪರರಾಗಿ ಬಸ್ ಗಳನ್ನು ಸ್ವಚ್ಛ ಮಾಡುವ ಸಂಬಂಧಿಸಿದ ಕೆಲಸಗಾರ್ತಿ ಝರೀನಾ ಬಂಡಿ ಅವಳಿಗೆ ವಿಷಯ ತಿಳಿಸಿ ಬಸ್‌ನಲ್ಲಾಗಲಿ ಇಲ್ಲವೇ ಸ್ವಚ್ಛ ಮಾಡಿ ಹೊರಚೆಲ್ಲಿದ ತ್ಯಾಜ್ಯದಲ್ಲಾಗಲಿ ಚಿನ್ನದ ಸರ ಏನಾದರೂ ಇದೆಯೋ ನೋಡಿ ಎಂದು ಹೇಳಿದ್ದಾರೆ.
ಝರೀನಾ ಬಂಡಿ ಸ್ವಚ್ಛಗೊಳಿಸಿದ ತ್ಯಾಜ್ಯದಲ್ಲಿ ಹುಡುಕಿದಾಗ ಚಿನ್ನದ ತಾಳಿಯ ಸರ ಸಿಕ್ಕಿದೆ. ಮಂಗಳವಾರ ವಿಜಯದಶಮಿಯ ಶುಭದಿನದಂದು ವಾಸಂತಿ ಹಿರೇಮಠ ಅವರಿಗೆ ಸರವನ್ನು ಘಟಕ ವ್ಯವಸ್ಥಾಪಕ ಸಾಹೇಬಗೌಡ ಬಿರಾದಾರ ನಗರದ ಸರಾಫ್ ವ್ಯಾಪಾರಸ್ಥ ಚಂದ್ರು ಹರಿಹರ ಮತ್ತು ಸಿಬ್ಬಂದಿ ಸಮ್ಮುಖದಲ್ಲಿ ಮಹಿಳೆಗೆ ನೀಡುವ ಜೊತೆಗೆ ಇದಕ್ಕಾಗಿ ಶ್ರಮಪಟ್ಟ ಎನ್ ಬಿ ಬಾದವಾಡಗಿ ನಿಯಂತ್ರಕರನ್ನು ಸತ್ಕರಿಸಿ ಗೌರವಿಸಿದರು.