ಮಳೆ ಹಾನಿ ಪ್ರದೇಶ ವೀಕ್ಷಣೆ ಮಾಡಿದ ಸಿದ್ದು…!

Advertisement

ಬೆಂಗಳೂರು: ವಿಪಕ್ಷನಾಯಕ ಸಿದ್ದರಾಮಯ್ಯ ಬೆಂಗಳೂರು ಸಿಟಿ ರೌಂಡ್ಸ್​ ಹೊಡೆದಿದ್ದು, ಬೆಂಗಳೂರಿನ ಮಳೆ ಹಾನಿ ಪ್ರದೇಶಕ್ಕೆ ಭೇಟಿ ಕೊಟ್ಟಿದ್ದಾರೆ. ಬೋಟ್​ನಲ್ಲಿ ಸಿದ್ದರಾಮಯ್ಯ ಬೆಂಗಳೂರು ವೀಕ್ಷಿಸಿದ್ದಾರೆ.

ಯಮಲೂರು ಎಪ್ಸಿಲಾನ್ ಲೇಔಟ್​ನಿಂದ ರೌಂಡ್ಸ್​ ಶುರುವಾಗಿದೆ. ರಬ್ಬರ್​​ ಬೋಟ್​ನಲ್ಲಿ ಕುಳಿತು ಮಳೆ ಹಾನಿ ಪ್ರದೇಶ ವೀಕ್ಷಣೆ ಮಾಡಲಾಗಿದೆ. ಎಷ್ಟು ಏರಿಯಾಗೆ ನೀರು ನುಗ್ಗಿದೆ..? ಎಷ್ಟು ಮನೆಗಳಿಗೆ ಹಾನಿ..? ಮಳೆ ನೀರು ನುಗ್ಗಲು ಕಾರಣ ಏನು ಅಂತಾ ವೀಕ್ಷಣೆ ಮಾಡಲಾಗಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯಗೆ ರಾಮಲಿಂಗಾರೆಡ್ಡಿ ಮತ್ತಿತರರು ಸಾಥ್​​​ ಕೊಟ್ಟಿದ್ದು,
ಬೆಳ್ಳಂದೂರು ರಿಂಗ್ ರಸ್ತೆಯ ಎಕೋ ಸ್ಪೇಸ್​ಗೆ ಸಿದ್ದು ಭೇಟಿ ಕೊಟ್ಟಿದ್ದಾರೆ.