ಕಲಬುರಗಿ: ತಳವಾರ ಸಮುದಾಯಕ್ಕೆ ಎಸ್ಟಿಪ್ರಮಾಣ ಪತ್ರ ನೀಡಬೇಕು ಎಂದು ಆಗ್ರಹಿಸಿ ರಾಜ್ಯ ತಳವಾರ ಎಸ್ ಟಿ ಹೋರಾಟ ಸಮಿತಿಯ ಪ್ರಮುಖರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಕಪ್ಪು ಬಾವುಟ ಪ್ರದರ್ಶನ ಮಾಡಲು ಯತ್ನಿಸಿದ ಎಂಟು ಜನರನ್ನು ಪೊಲೀಸರು ವಶಕ್ಕೆ ಪಡೆದರು. ಇಲ್ಲಿನ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಪ್ರಮುಖರನ್ನು ಬಂಧಿಸಲಾಗಿದೆ.
ಸರ್ದಾರ್ ರಾಯಪ್ಪ, ರಾಜೇಂದ್ರ ರಾಜವಾಳ, ಸುನೀತಾ ತಳವಾರ, ಸಂತೋಷ ಸೇರಿ ಪ್ರಮುಖರನ್ನು ವಿವಿ ಪೊಲೀಸ್ ಠಾಣೆ ಯಲ್ಲಿಸಲಾಗಿದೆ.