ಮುರನಾಳದಲ್ಲಿ ಮೊಸಳೆ ಸೆರೆ ಕಾರ್ಯಾಚರಣೆ..!

ಮೊಸಳೆ ಸೆರೆ ಕಾರ್ಯಾಚರಣೆ..
Advertisement

ಬಾಗಲಕೋಟೆ: ಸಮೀಪದ ಮುರನಾಳ ಪುನರ್ವಸತಿ ಕೇಂದ್ರದ ಕೆರೆಯಲ್ಲಿ ಕಾಣಿಸಿಕೊಂಡಿರುವ ಮೊಸಳೆ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ಶುಕ್ರವಾರ ಆರಂಭಿಸಿದೆ‌.
ಇಂದು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಮೊಸಳೆ ಪತ್ತೆ ಕಾರ್ಯ ಶುರು ಮಾಡಿದ್ದು, ಸಂಜೆ ೫ರ ವೇಳೆಗೆ ಕಾರ್ಯಾಚರಣೆ ನಡೆಯುತ್ತಿದೆ. ಕೆರೆಯಲ್ಲಿ ಬೋಟ್ ಗಳ ಮೂಲಕ ಮೊಸಳೆ ಹಿಡಿಯವ ಕಾರ್ಯಾಚರಣೆ ಆರಂಭವಾಗಿದ್ದು, ಪುಟ್ಟಿಯೊಂದನ್ನು ಬಿಟ್ಟು ಅದರ ಜತೆಗೆ ಬೃಹದಾಕಾರದ ಬಲಿ ಬೀಸಲಾಗುತ್ತದೆ‌ ಆ ಮೂಲಕ ಮೊಸಳೆ ಹಿಡಿಯುವ ಕಾರ್ಯಾಚರಣೆ ನಡೆದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.