ಮೂವರು ಪೇದೆ ಸೇರಿ 15 ಜನರ ವಿರುದ್ಧ ದೂರು

Advertisement

ವಿಜಯಪುರ: ಇಸ್ಟೇಟ್ ಆಟದಲ್ಲಿ ತೊಡಗಿದ್ದ ಮೂವರು ಪೇದೆಗಳು ಸೇರಿದಂತೆ ೧೫ ಜನರನ್ನು ಇಲ್ಲಿನ ಗೋಲಗುಮ್ಮಟ ಸಿಪಿಐ ಬಂಧಿಸಿ ಅವರಿಂದ ೪೬,೩೪೦ ರೂ. ನಗದು ವಶಪಡಿಸಿಕೊಂಡ ಘಟನೆ ಕನಕದಾಸ ಬಡಾವಣೆಯ ಆನಮೋಲ್ ಹೊಟೇಲ್‌ನಲ್ಲಿ ನಡೆದಿದೆ.
ಆದರ್ಶನಗರ ಠಾಣೆಯ ವಿಠ್ಠಲ ರೊಳ್ಳಿಘಿ, ಸಿಇಎನ್ ಠಾಣೆಯ ಶ್ರೀಶೈಲ ಕೆಂಪೆಗೌಡ, ಡಿಎಆರ್ ಪೇದೆ ಮುತಪ್ಪ ಜಂಗಮಶೆಟ್ಟಿ, ಗದ್ದನಕೇರಿಯ ರಮೇಶ ಮಾಶ್ಯಾಳ, ಮುರಾಣಕೇರಿಯ ಅಪ್ಪಾಸಾಹೇಬ ಶೆಟಗಾರ, ಕುಂಬಾರ ಗಲ್ಲಿಯ ನಜೀರ ಮಹ್ಮದಯುಷುಪ ನಾಲಬಂದ, ಬಬಲೇಶ್ವರದ ಆನಂದ ಬೂದಿಹಾಳ, ಹಮಾಲ ಕಾಲೊನಿಯ ಸಾಹೇಬಗೌಡ ಪಾಟೀಲ, ಗ್ಯಾಂಗ್‌ಬಾವಡಿಯ ಮೊನಪ್ಪ ಸಗರ, ಶಾಸಿನಗರದ ಮಲ್ಲಿಕಾರ್ಜುನ ಅಂಗಡಿ, ಭಾವಸಾರ ನಗರದ ರಾಜಶೇಖರ/ರಾಜೇಂದ್ರ ಶೆಟಗಾರ, ಗೌಡರ ಓಣಿಯ ಶಿವಾನಂದ ಕಲಬುರ್ಗಿ, ರಾಜಕುಮಾರ ಲೇಔಟ್‌ನ ಯಲಗೂರೇಶ ಕುಲಕರ್ಣಿ, ಮುತ್ತಪ್ಪ ಬಬಲಾದಿ, ಚಂದ್ರಗೌಡ ಪಾಟೀಲ ಸೇರಿದಂತೆ ೧೫ ಜನರ ವಿರುದ್ಧ ಗೋಲಗುಮ್ಮಟ ಠಾಣೆಯ ಸಿಪಿಐ ಮಲ್ಲಯ್ಯ ಮಠಪತಿ ಕಾನೂನು ಕ್ರಮ ಕೈಗೊಂಡಿದ್ದಾರೆ.