ಮೊಟ್ಟೆ ಎಸೆದಿದ್ದೇಕೆ ಆತ್ಮಾವಲೋಕನ ಮಾಡಿಕೊಳ್ಳಿ: ಪ್ರತಾಪ ಸಿಂಹ

ಪ್ರತಾಪಸಿಂಹ
Advertisement

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದಿರುವುದು ಸರಿಯಲ್ಲ. ಆದರೆ, ಮೊಟ್ಟೆ ಬಿಸಾಡಲು ಕಾರಣ ಏನು ಅಂತಾ ಸಿದ್ದರಾಮಯ್ಯ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸಂಸದ ಪ್ರತಾಪಸಿಂಹ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಟಿಪ್ಪು ಜಯಂತಿ ಮಾಡಿ ಅಂತಾ ಯಾರು ಕೇಳಿಕೊಂಡರು?, ಕೊಡಗಿನಲ್ಲಿ ಟಿಪ್ಪು ಬಗ್ಗೆ ಯಾವ ಅಭಿಪ್ರಾಯ ಇದೆ ಎಂದು ಸಿದ್ದರಾಮಯ್ಯಗೆ ಗೊತ್ತಿಲ್ವಾ?, ಕೊಡಗಿನ ಜನ ನಾಯಿಗೆ ಟಿಪ್ಪು ಅಂತಾ ಹೆಸರಿಡುವಷ್ಟು ಆಕ್ರೋಶ ಇದೆ. ಅಲ್ಲದೇ ಕೊಡಗು ಜನರ ಆಚಾರ-ವಿಚಾರ ಬಗ್ಗೆ ಕೆಟ್ಟದಾಗಿ ಹೇಳಿಕೆ ನೀಡಿದ್ದ ಸಿದ್ದರಾಮಯ್ಯನವರ ಬಗ್ಗೆ ಸಹಜವಾಗಿ ಆಕ್ರೋಶ ವ್ಯಕ್ತವಾಗುತ್ತದೆ ಎಂದರು.

ಪ್ರತಾಪಸಿಂಹ