ರಾಜ್ಯಸಭಾ ಸದಸ್ಯರ ಕಾರು ಅಡ್ಡಗಟ್ಟಿದ ಪ್ರಕರಣ: 18 ಜನರ ಮೇಲೆ ಎಫ್‌ಐಆರ್

ಕಡಾಡಿ
Advertisement

ಬೆಳಗವಾವಿ(ಘಟಪ್ರಭಾ): ಶುಕ್ರವಾರ ಸಂಜೆ ಇಲ್ಲಿನ ಮೃತ್ಯುಂಜಯ ಸರ್ಕಲ್‌ನಲ್ಲಿ ಸತೀಶ ಜಾರಕಿಹೊಳಿ ಬೆಂಬಲಿಗರು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿಯವರ ಕಾರನ್ನು ಅಡ್ಡಗಟ್ಟಿ ಹಲ್ಲೆಗೆ ಯತ್ನಿಸಿದ ಪ್ರಕರಣದಲ್ಲಿ ಭಾಗಿಯಾದ ಪ್ರಮುಖ 18 ಆರೋಪಿಗಳ ಮೇಲೆ ಘಟಪ್ರಭಾ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಶನಿವಾರ ಸಂಜೆ ತನಕ ಯಾವ ಆರೋಪಿಗಳನ್ನು ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.