ರೈಲ್ವೆ ನಿಲ್ದಾಣದಲ್ಲಿ ಸ್ಥಾಪನೆಯಾಗದ ಚೆಕ್‌ಪೋಸ್ಟ್, ಡಿಸಿ, ಎಸ್ಪಿ ಗರಂ..!

Advertisement

ಬಾಗಲಕೋಟೆ: ಚುನಾವಣೆ ನೀತಿ ಸಂಹಿತೆ ಘೋಷಣೆ ನಂತರವೂ ನಗರ ರೈಲು ನಿಲ್ದಾಣದಲ್ಲಿ ಚೆಕ್ ಪೋಸ್ಟ್ ಸ್ಥಾಪಿಸದೆ ನಿರ್ಲಕ್ಷಿಸಿದ ರೈಲ್ವೆ ಪೋಲಿಸರನ್ನು ಜಿಲ್ಲಾ ಚುನಾವಣಾಧಿಕಾರಿ ಕೆ.ಜಾನಕಿ, ಎಸ್ಪಿ ವೈ.ಅಮರನಾಥ ರೆಡ್ಡಿ ತರಾಟಗೆ್ ತೆಗೆದುಕೊಂಡರು.

ಸಿಇಒ ಶಶಿಧರ ಕುರೇರ ಅವರ ಜತೆಗೂಡಿ ರೈಲು ನಿಲ್ದಾಣಕ್ಕೆ ಭೇಟಿ ನೀಡಿದ ಅವರು ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಇಂಥದೊಂದು ನಿರ್ಲಕ್ಷ್ಯ ತೋರಿದರೆ ಯಾವ ಕಾರಣಕ್ಕೂ ಅದನ್ನು ಸಹಿಸಲು ಸಾಧ್ಯ‌ ಇಲ್ಲ ಎಂದು ತೀವ್ರ ತರಾಟೆಗೆ ತೆಗೆದುಕೊಂಡು ಛೀಮಾರಿ ಹಾಕಿದರು.