ಲವ್ ಜಿಹಾದ್ ಗೆ ಬಲಿಯಾಗದಿರಿ

Advertisement

ಇಳಕಲ್: ಮುಸ್ಲಿಂ ಯುವಕರು ಬೀಸುವ ಲವ್ ಜಿಹಾದ್ ಬಲಿಗೆ ಹಿಂದೂ ಯುವತಿಯರು ಬೀಳಬಾರದು ರಾಮನಂತಿರುವ ಏಕ ಪತ್ನಿ ವೃತಸ್ಥರ ಹಿಂದೆ ಹೋಗಬೇಕೇ ಹೊರತು ರಹೀಮನಂತಹವನ ಹಿಂದೆ ಬೆನ್ನು ಹತ್ತಿ ೩೫ ತುಣುಕುಗಳಾಗಿ ಫ್ರಿಜ್ ನಲ್ಲಿ ಸೇರುವಂತವರಾಗಬಾರದು ಎಂದು ಚೈತ್ರಾ ಕುಂದಾಪುರ ಹೇಳಿದರು .
ಇಲ್ಲಿನ ಕಂಠಿ ಸರ್ಕಲ್ ದಲ್ಲಿ ಹಿಂದೂ ಸೇವಾ ಟ್ರಸ್ಟ್ ವತಿಯಿಂದ ಯೋಗಿಶ್ ಬೀಳಗಿ ವೇದಿಕೆಯಲ್ಲಿ ಹಮ್ಮಿಕೊಂಡ ಸಣ್ಣ ಶಿವಾಜಿ ಜಯಂತಿ ಸಮಾರೋಪ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು ಶಿವಾಜಿ ಮಹಾರಾಜರು ಹಿಂದೂ ಸಾಮ್ರಾಜ್ಯವನ್ನು ಕಟ್ಟಿ ಪ್ರತಿಯೊಬ್ಬರಲ್ಲಿ ಹಿಂದುತ್ವದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಿದರು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕೆಲವರು ಶಿವಾಜಿಯವರನ್ನು ಬೆಳವಡಿ ಮಲ್ಲಮ್ಮ ಸೋಲಿಸಿದಳು ಅಂತಾ ಕತೆ ಕಟ್ಟುತ್ತಿದ್ದಾರೆ ಮಹಿಳಾ ಸೈನ್ಯವನ್ನು ಕಟ್ಟಿದ್ದ ಬೆಳವಡಿ ಮಲ್ಲಮ್ಮನ ಬಳಿ ಶಿವಾಜಿ ಮಹಾರಾಜರು ಹೋಗಿ ಅವಳ ಶೌರ್ಯ ಪ್ರತಾಪವನ್ನು ಹೊಗಳಿದ್ದಾರೆ ಆದರೆ ಹಿಂದೂ ಧರ್ಮದಲ್ಲಿ ಇರುವ ವಿವಿಧ ಜಾತಿಗಳಲ್ಲಿ ಬೆಂಕಿ ಹಚ್ಚುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ ಎಂದು ದೂರಿದರು
ಅಮರಪ್ರೇಮಕ್ಕೆ ತಾಜಮಹಲ್ ಉದಾಹರಣೆ ಎಂದು ಕೊಡುತ್ತಾರೆ ಆದರೆ ನಿಜವಾದ ಅಮರಪ್ರೇಮ ಎಂದರೆ ಲಂಕಾದಲ್ಲಿ ಇದ್ದ ಸೀತಾದೇವಿಯನ್ನು ಕರೆತರಲು ಶ್ರೀರಾಮಚಂದ್ರ ಸಮುದ್ರಕ್ಕೆ ಕಟ್ಟಿದ ರಾಮಸೇತುವಾಗಿದೆ ಎಂದು ಅವರು ಬಣ್ಣಿಸಿದರು.
ಗೋಮಾತೆಯನ್ನು ರಕ್ಷಿಸುವ ಹಿಂದೂ ಯುವಕರ ತಂಡ ದೊಡ್ಡದಾಗಿ ಬೆಳೆಯುತ್ತಿದೆ ಅಂತಹ ಮಕ್ಕಳನ್ನು ತಂದೆ ತಾಯಂದಿರು ಹೆಚ್ಚು ಪ್ರೀತಿಸಬೇಕು ಅವರಿಗೆ ಅಡೆತಡೆ ಉಂಟು ಮಾಡಬಾರದು ಮಹಿಳೆಯರು ಮತ್ತು ಪುರುಷರು ಕುಂಕುಮವನ್ನು ಹಚ್ಚಿಕೊಳ್ಳಬೇಕು ಎಂದು ಹೇಳಿದ ಅವರು ಗೋ ಪೂಜೆಯನ್ನು ಮಾಡುವ ಮಕ್ಕಳು ಎಂದೂ ತಮ್ಮ ತಂದೆ ತಾಯಿಯನ್ನು ವೃದ್ದಾಶ್ರಮಕ್ಕೆ ಸೇರಿಸುವದಿಲ್ಲ ಅಂತಹ ಮಕ್ಕಳಿಗೆ ಜನ್ಮ ಕೊಟ್ಟಿದ್ದಕ್ಲೆ ಗರ್ವ ಪಡಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಿಂದೂ ಸೇವಾ ಟ್ರಸ್ಟ್ ಮುಖಂಡರಾದ ಪ್ರದೀಪ ಅಮರಣ್ಣನವರ, ಪರಶುರಾಮ ಬಿಸಲದಿನ್ನಿ ಕಪಿಲ ಪವಾರ , ಶಿವು ಮಾದಗಂಡಿ ಮಾತನಾಡಿದರು ಅಧ್ಯಕ್ಷತೆಯನ್ನು ನಗರಸಭೆಯ ಉಪಾಧ್ಯಕ್ಷ ಸಂತೋಷ ಐಲಿ ವಹಿಸಿದ್ದರು ಶರಣ್ಯ ಅಂಗಡಿ ಕಾರ್ಯಕ್ರಮ ನಿರೂಪಿಸಿದರು.