ಲೋಕಾಯುಕ್ತ ಬಲೆಗೆ ಬಿದ್ದ ಪಾಲಿಕೆ ವ್ಯವಸ್ಥಾಪಕ

ವೆಂಕಟೇಶ
Advertisement

ದಾವಣಗೆರೆ: ಜಕಾತಿ ಸಂಬಂಧ ಟೆಂಡರ್ ಕೊಡಲು ಲಂಚ ಪಡೆಯುತ್ತಿದ್ದ ವೇಳೆ ಮಹಾನಗರ ಪಾಲಿಕೆ ವ್ಯವಸ್ಥಾಪಕ ವೆಂಕಟೇಶ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದದ್ದಾರೆ.
ಕೃಷ್ಣಪ್ಪ ಎಂಬುವವರಿಗೆ ಜಕಾತಿ ನೀಡಲು 7ಲಕ್ಷ ರು ಗೆ ಬೇಡಿಕೆ ಇಟ್ಟಿದ್ದ, ವೆಂಕಟೇಶ್‌ಗೆ ಕೃಷ್ಣಪ್ಪ ಅವರು ಮುಂಗಡವಾಗಿ 2 ಲಕ್ಷ ರು, ನೀಡಿದ್ದರು. ಉಳಿದ 5 ಲಕ್ಷ ಕೊಡಲು ಸಾಧ್ಯವಾಗುವುದಿಲ್ಲ. 3 ಲಕ್ಷ ಮಾತ್ರ ಕೊಡುತ್ತೇನೆ ಎಂದು ಕೃಷ್ಣಪ್ಪ ಕೊಡಲು ತೆರಳಿದಾಗ, ಹಣವನ್ನು ಪಡೆಯುತ್ತಿದ್ದ ವೇಳೆ ವೆಂಕಟೆಶ್ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ಪಡೆದ ಲಂಚದಲ್ಲಿ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಅವರಿಗೂ ಪಾಲು ಇರುವುದು ಪ್ರಾಥಮಿಕ ತನಿಖೆಯಿಂದ ಪತ್ತೆಯಾಗಿದ್ದು, ತನಿಖೆ ಬಳಿಕವಷ್ಟೇ ನಿಜಾಂಶ ಹೊರಬರಲಿದೆ.