ವಿಜಯಪುರದಲ್ಲಿ ಬಿಜೆಪಿ ರಣಕಹಳೆ

Advertisement

ವಿಜಯಪುರ: ವಿಧಾನಸಭೆ ಚುನಾವಣೆಗೆ ಬಿಜೆಪಿ ರಣಕಹಳೆ ಮೊಳಗಿಸಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ಬಿಜೆಪಿ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜೆ.ಪಿ. ನಡ್ಡಾ ಅವರು, ವಿಕಾಸವೆಂದರೆ ಬಿಜೆಪಿ, ವಿನಾಶವೆಂದರೆ ಕಾಂಗ್ರೆಸ್ ಎಂದು ಟೀಕಾಪ್ರಹಾರ ನಡೆಸಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೈಗೊಂಡ ಕಾರ್ಯಕ್ರಮದ ಫಲವಾಗಿ ಭಾರತ ವಿಶ್ವ ಭೂಪಟದಲ್ಲಿ ಮಿಂಚುತ್ತಿರುವ ಅಂಶಗಳನ್ನು ಉಲ್ಲೇಖಿಸಿದರು.
ಸಕಲರ ವಿಕಾಸವೇ ಬಿಜೆಪಿ ಮೂಲಮಂತ್ರವಾದರೆ, ಅರಾಜಕತೆ ಸೃಷ್ಟಿಯೇ ಕಾಂಗ್ರೆಸ್ ಇತಿಹಾಸ. ತೋಳ್ಬಲ, ಹಣಬಲದ ಮೂಲಕ ಸಮಾಜವನ್ನು ಇಬ್ಭಾಗವಾಗಿಸುವ ಕೆಲಸದಲ್ಲಿಯೇ ಕಾಂಗ್ರೆಸ್ ತೊಡಗಿಸಿಕೊಂಡಿದೆ.‌ ಭಾರತವನ್ನು ಇಬ್ಭಾಗವಾಗಿಸಿದ ನಾಯಕರನ್ನು ತಮ್ಮ ಅಕ್ಕ ಪಕ್ಕದಲ್ಲಿರಿಸಿಕೊಂಡು ರಾಹುಲ್ ಗಾಂಧಿ ಭಾರತ ಜೋಡೋ ಯಾತ್ರೆ ನಡೆಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.