ವಿಜಯಪುರ-ಬೆಂಗಳೂರು ಎಸಿ ವೋಲ್ವೋ ಬಸ್ ಸಂಚಾರ

Advertisement

ಬೆಂಗಳೂರು: ವಿಜಯಪುರ-ಬೆಂಗಳೂರು ಎಸಿ ವೋಲ್ವೋ ಬಸ್ ಸಂಚಾರಕ್ಕೆ ಸಚಿವ ಎಂ. ಬಿ. ಪಾಟೀಲ ನಿನ್ನೆ ದಿನ ಹಸಿರು ನಿಶಾನೆ ತೋರಿಸಿ ಸಂಚಾರಕ್ಕೆ ಚಾಲನೆ ನೀಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ವಿಜಯಪುರ ಘಟಕದಿಂದ ನೂತನವಾಗಿ ವಿಜಯಪುರ-ಬೆಂಗಳೂರು ಎಸಿ ವೋಲ್ವೋ ಬಸ್ ಸೇವೆ ಆರಂಭಿಸಿದ್ದು, ನಿನ್ನೆ ದಿನ ಹಸಿರು ನಿಶಾನೆ ತೋರಿಸಿ ಸಂಚಾರಕ್ಕೆ ಚಾಲನೆ ನೀಡಿದೆ. ಈ ವೇಳೆ ಸಂಸದ ರಮೇಶ ಜಿಗಜಿಣಗಿ, SP ಋಷಿಕೇಶ ಸೋನಾವಣೆ, DC ಟಿ. ಭೂಬಾಪಲನ್, ZP CEO ಋಷಿ ಆನಂದ್ ಮಹಾನಗರ ಪಾಲಿಕೆಯ ನೂತನ ಮೇಯರ್, ಉಪಮೇಯರ್ ಮೊದಲಾದವರು ಉಪಸ್ಥಿತರಿದ್ದರು ಎಂದಿದ್ದಾರೆ.