ವಿನಾಯಕನಿಗೂ ಸಾವರ್ಕರ್‌ಗೂ ಏನು ಸಂಬಂಧ: ಡಿಕೆಶಿ ಪ್ರಶ್ನೆ

ಡಿ.ಕೆ. ಶಿವಕುಮಾರ್
Advertisement

ವಿಘ್ನ ನಿವಾರಕ ವಿನಾಯಕನಿಗೂ ಸಾವರ್ಕರ್‌ಗೂ ಏನು ಸಂಬಂಧ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​​ ಪ್ರಶ್ನಿಸಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ತಿಲಕ ಅವರ ಫೋಟೋ ಹಾಕಿದರೆ ಅದಕ್ಕೊಂದ ಅರ್ಥವಿದೆ. ಆದರೆ, ಸಾವರ್ಕರ್ ಫೋಟೋ ಹಾಕುವುದು ಯಾಕೆ? ಎಂದು ಪ್ರಶ್ನಿಸಿದರು. ತಮ್ಮ ಪಕ್ಷವನ್ನು ತಾವೇ ಡಿಗ್ರೇಡ್ ಮಾಡಿಕೊಳ್ಳುತ್ತಿದ್ದಾರೆ. ತಮ್ಮ ತತ್ವ, ಸಿದ್ಧಾಂತವನ್ನು ಅವರೇ ಕೆಡಿಸಿಕೊಳ್ಳುತ್ತಿದ್ದಾರೆ. ಅವರು ಅಭಿವೃದ್ಧಿ ಮಾಡದೇ ಕೇವಲ ಗದ್ದಲ, ಗಲಾಟೆ ಮಾಡುವುದನ್ನೇ ತಮ್ಮ ಗುರಿಯಾಗಿಸಿಕೊಂಡಿದ್ದಾರೆ ಎಂದರು.