ಶನಿವಾರವೇ ಜನೋತ್ಸವ ಕಾರ್ಯಕ್ರಮ : ಸಚಿವ ಡಾ.ಕೆ.ಸುಧಾಕರ್​..

Advertisement

ಬೆಂಗಳೂರು : ಭಾನುವಾರ ಪಿತೃಪಕ್ಷ ಇರೋದ್ರಿಂದ ಶನಿವಾರವೇ ಜನೋತ್ಸವ ಕಾರ್ಯಕ್ರಮ ನಡೆಸುತ್ತೇವೆ ಎಂದು ಸಚಿವ ಡಾ.ಕೆ.ಸುಧಾಕರ್​ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸಚಿವ ಡಾ.ಕೆ.ಸುಧಾಕರ್​ ಮಾತನಾಡಿ ಭಾನುವಾರ ರಜೆ ಅಂತಾ ಅಧ್ಯಕ್ಷರು ಡೇಟ್ ಫಿಕ್ಸ್ ಮಾಡಿದ್ರು, ಪಿತೃಪಕ್ಷ ಅಶುಭ ದಿನ ಅಂತಾ ಒಂದು ದಿನ ಮೊದಲೇ ಮಾಡುತ್ತಿದ್ಧೇವೆ. ನಮ್ಮ ಎಲ್ಲಾ ಸಚಿವರೂ ತಯಾರಿ ಮಾಡಿ ಕೊಂಡಿದ್ದಾರೆ, ಮೂರು ವರ್ಷದ ಸಾಧನೆ ರಿಪೋರ್ಟ್​ ಕಾರ್ಡ್​ ಕೊಡ್ತೇವೆ. ಜನೋತ್ಸವ ಅನ್ನೋ ಹಬ್ಬದ ವಾತಾವರಣ ವಾಗಿದೆ. ಅತಿವೃಷ್ಟಿ ಹಿನ್ನೆಲೆಯಲ್ಲಿ ಜನ ಸ್ಪಂದನ ಅಂತಾ ಹೆಸರಿಟ್ಟಿದ್ದೇವೆ. ಕಾರ್ಯಕ್ರಮದ ಎಲ್ಲಾ ಸಿದ್ಧತೆ ಆಗುತ್ತಿದೆ ಎಂದು ಹೇಳಿದ್ಧಾರೆ.