ಶಾಮನೂರ ಜತೆ ಚರ್ಚಿಸಿ ಪ್ರತಿಕ್ರಿಯಿಸುವೆ: ಸವದಿ

Advertisement

ಬಾಗಲಕೋಟೆ: ಲಿಂಗಾಯತ ಅಧಿಕಾರಿಗಳನ್ನು ಕಡೆಗಣಿಸಲಾಗುತ್ತಿದೆ ಎಂದು ಹಿರಿಯ ನಾಯಕ ಶಾಮನೂರ ಶಿವಶಂಕರಪ್ಪ ಯಾವ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೆ ಎಂಬುದು ತಮಗೆ ತಿಳಿದಿಲ್ಲ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.
ಜಿಲ್ಲೆಯ ಮಹಾಲಿಂಗಪುರದಲ್ಲಿ ದೇಸಾಯಿ ಚಿತ್ರದಲ್ಲಿ ಅಭಿನಯಿಸಿದ ನಂತರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಶಾಮನೂರು ಶಿವಶಂಕರಪ್ಪನವರು ಸಮಾಜದ ಅಗ್ರಸ್ಥಾನದಲ್ಲದ್ದಾರಡ. ಅವರ ಯಾವ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೆ ತಿಳಿದಿಲ್ಲ ಅವರೊಂದಿಗೆ ಚರ್ಚಿಸಿ ಪ್ರತಿಕ್ರಿಯಿಸುವುದಾಗಿ ಹೇಳಿದರು. ಲಿಂಗಾಯತರಲ್ಲಿ ೭ ಜನರನ್ನು ಸಚಿವರನ್ನಾಗಿಸಲಾಗಿದೆ. ಎಲ್ಲ ಸರ್ಕಾರದಲ್ಲೂ ಒಂದೊಂದು ಸಮಾಜಕ್ಕೆ ಪ್ರಾತಿನಿಧ್ಯ ನೀಡುವುದು ಕಷ್ಟ ಎಂದರು.
ತಮ್ಮನ್ನೂ ಸಚಿವರನ್ನಾಗಿಸದೆ ಲಿಂಗಾಯಿತರನ್ನು ಕಡೆಗಣಿಸಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಅದನ್ನು ಒಪ್ಪುವುದಿಲ್ಲ.ರಾಷ್ಟ್ರೀಯ ಪಕ್ಷಗಳಲ್ಲಿ ಎಲ್ಲ ಸಮುದಾಯಗಳನ್ನು ತೆಗೆದುಕೊಂಡು ಹೋಗುವ ಕರ್ತವ್ಯ, ದೂರದೃಷ್ಠಿ ಇರುತ್ತದೆ. ಮಂತ್ರಿ ಆಗುವ ಬಯಕೆ ಇರುತ್ತದೆ ಸಮಾಜದಲ್ಲಿ ಸಿಕ್ಕ ಗೌರವಕ್ಕೆ ತೃಪ್ತಿ ಪಡಬೇಕೆಂದರು.