ಸಂತಸ ಅರಳುವ ಸಮಯ… ಮಲೆನಾಡಿಗೆ ಇದು ರಮ್ಯ ಚೈತ್ರ ಕಾಲ

Advertisement

ಶಿವಮೊಗ್ಗ: ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೊರಟ ಮೊಟ್ಟ ಮೊದಲ ಇಂಡಿಗೊ ವಿಮಾನದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ, ಸಚಿವ ಎಂ.ಬಿ.ಪಾಟೀಲ್ ಪಯಣ ಮಾಡಿದರು ಅವರೊಂದಿಗೆ ಸಚಿವ ಎಂ.ಬಿ.ಪಾಟೀಲ್, ಶಾಸಕರಾದ ಆರಗ ಜ್ಞಾನೇಂದ್ರ, ವಿಜಯೇಂದ್ರ, ಬೇಳೂರು ಗೋಪಾಲಕೃಷ್ಣ, ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಶಾಸಕ ಹರತಾಳು ಹಾಲಪ್ಪ ಪ್ರಯಾಣಿಸಿದ್ದಾರೆ. ಸಾಮಾಜಿ ಜಾಲತಾಣದಲ್ಲಿ ಪಯಣದ ವಿಡಿಯೋ ಹಂಚಿಕೊಂಡಿರುವ ಸಚಿವ ಎಂ.ಬಿ ಪಾಟೀಲ್‌ರು ಐತಿಹಾಸಿಕ ಮೊದಲ ವಿಮಾನಯಾನದಲ್ಲಿ ನಮ್ಮ ಪಯಣ ಎಂದಿದ್ದಾರೆ, ಸಂಸದ ಬಿ ವೈ ರಾಘವೇಂದ್ರ ಅವರು ಸಂತಸ ಅರಳುವ ಸಮಯ… ಮಲೆನಾಡಿಗೆ ಇದು ರಮ್ಯ ಚೈತ್ರ ಕಾಲ ಎಂದಿದ್ದಾರೆ.