ಸಂಪುಟ ವಿಸ್ತರಣೆ ಸಿಎಂ, ವರಿಷ್ಠರಿಗೆ ಬಿಟ್ಟ ವಿಚಾರ

Advertisement

ಹುಬ್ಬಳ್ಳಿ: ರಾಜ್ಯ ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎಂಬುದನ್ನು ಸಿಎಂ ಹೇಳಿದ್ದಾರೆ.ಹೀಗಾಗಿ ಬೇಡ ಅನ್ನಲು ಆಗುವುದಿಲ್ಲ. ಸರ್ಕಾರದಲ್ಲಿ‌ ಆರು ಸ್ಥಾನಗಳು ಖಾಲಿ ಇವೆ.ಆದ್ದರಿಂದ ಸಚಿವ ಸಂಪುಟ ವಿಸ್ತರಣೆ ಆಗಬೇಕು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಸಿಎಂ ಹಾಗೂ ವರಿಷ್ಠರಿಗೆ ಬಿಟ್ಟ ವಿಚಾರ. ನನ್ನ ಪ್ರಕಾರ ಸಚಿವ ಸಂಪುಟ ವಿಸ್ತರಣೆ ಮಾಡಬೇಕು ಎಂದರು.
ಅವಳಿನಗರದಲ್ಲಿ ಕುಡಿಯುವ ನೀರು‌ ಸರಬರಾಜು ಕುರಿತು‌ ಇನ್ನೊಂದು ಸಭೆ ನಡೆಸಲಾಗುವುದು. ಕುಡಿಯುವ ನೀರಿನ ಸಮಸ್ಯೆ ನಿಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಎಲ್ ಆಂಡ್ ಟಿ ಕಂಪನಿಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಜೊತೆಗೆ ಚರ್ಚೆ ಮಾಡಲಾಗಿದೆ.‌ವಎಲ್ ಆಂಡ್ ಟಿ ಕಂಪನಿಗೆ ನೀಡಿದ ಗಡುವು ಮುಗಿದಿದೆ. ಇದೇ ರೀತಿ ಸಮಸ್ಯೆ ಮುಂದುವರೆದರೆ ಅವರಿಂದ ಯೋಜನೆ ವಾಪಸ್ ಪಡೆದು ಸಮರ್ಪಕ‌ ನೀರು ಸರಬರಾಜಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು