ಸಚಿವ ಉಮೇಶ್​ ಕತ್ತಿ ನಿಧನ ಹಿನ್ನೆಲೆ.. ಅಘೋಷಿತ ಬಂದ್ ಮಾಡಿ ಸಂತಾಪ ಸೂಚಿಸಿದ ಜನರು..!

ಉಮೇಶ ಕತ್ತಿ
Advertisement

ಬೆಂಗಳೂರು: ಸಚಿವ ಉಮೇಶ್​ ಕತ್ತಿ ನಿಧನ ಹಿನ್ನೆಲೆ, ಸ್ವಕ್ಷೇತ್ರ ಹುಕ್ಕೇರಿಯಲ್ಲಿ ನೀರವ ಮೌನ ಆವರಿಸಿದೆ. ಅಘೋಷಿತ ಬಂದ್ ಮಾಡಿ ಜನರು ಸಂತಾಪ ಸೂಚಿಸಿದ್ದಾರೆ.

ಹುಕ್ಕೇರಿ ಪಟ್ಟಣದಲ್ಲಿ ಅಘೋಷಿತ ಬಂದ್ ವಾತಾವರಣ ಸೃಷ್ಟಿಯಾಗಿದ್ದು, ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿ ಸಂತಾಪ ಸೂಚನೆ ಮಾಡಲಾಗಿದೆ. ಹುಕ್ಕೇರಿ ಪಟ್ಟಣ ಬಿಕೋ ಎನ್ನುತ್ತಿದೆ. ಹುಕ್ಕೇರಿ ಕ್ಷೇತ್ರದ ಪಟ್ಟಣಗಳಲ್ಲಿ ನೀರವ ಮೌನ ಆವರಿಸಿದ್ದು, ಉಮೇಶ್​ ಕತ್ತಿ ತೋಟದ ಮನೆ ಕಡೆಗೆ ಜನರು ಬರುತ್ತಿದ್ದಾರೆ.