ಸರ್ಕಾರ ಎಲ್ಲಾ ಸಮಾಜಗಳಿಗೆ ನ್ಯಾಯ ಒದಗಿಸಿದೆ

ರಾಜೀವ
Advertisement

ಬೆಳಗಾವಿ: ಎಸ್‌ಸಿ ಸಮುದಾಯದ ಒಳ ಮೀಸಲಾತಿಗೆ ಬಂಜರಾ ಸಮುದಾಯ ವಿರೋಧ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಬಂಜಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ್‌ಗೆ ಆ ಸಮುದಾಯದ ಜನರೇ ಪ್ರಶ್ನೆ ಮಾಡಿ ನೀರಿಳಿಸಿದ ಘಟನೆ ಮಂಗಳವಾರ ನಡೆದಿದೆ.
ಬೆಳಗಾವಿಯ ಸಂಗಮೇಶ್ವರ ನಗರದಲ್ಲಿ ಬಂಜಾರ ಸಮುದಾಯ ಭವನ ಉದ್ಘಾಟನೆಗೆ ಬಂದಿದ್ದ ಪಿ.ರಾಜೀವ್ ತಮ್ಮ ಸಮುದಾಯದವರಿಂದ ಮೀಸಲಾತಿ ಕಡಿತ ವಿಚಾರದ ಬಗ್ಗೆ ಪ್ರಶ್ನೆ ಎದುರಿಸಬೇಕಾಯಿತು. ಈ ವೇಳೆ ಜನರಿಗೆ ಎಲ್ಲವನ್ನೂ ವಿವರಿಸಿ ಹೇಳಿದ ಶಾಸಕ ರಾಜೀವ ಪರಿಶಿಷ್ಟ ಜಾತಿ ಎಂದರೇನು ಎಂದು ಮೊದಲು ತಿಳಿದುಕೊಳ್ಳಿ. ಸಮುದಾಯದ ಜನರಿಗೆ ಸಂವಿಧಾನದ ಬಗ್ಗೆ ಮಾಹಿತಿ ಕೊಟ್ಟು ತಿಳಿ ಹೇಳಿದ ಪಿ.ರಾಜೀವ್ ಬಂಜಾರ, ಬೋವಿ, ಕೊರಚ, ಕೊರಮ ಒಂದು ಗ್ರೂಪ್ ಮಾಡಿದ್ದಾರೆ. 97ಜಾತಿ ಸೇರಿ ಎಡ, ಬಲ ಮತ್ತು ಅಲೆಮಾರಿ ಗುಂಪು ಮಾಡಿದ್ದಾರೆ. ನಾಲ್ಕೇ ಜಾತಿಗಳಿಗೆ ನಾಲ್ಕೂವರೆ ಪರ್ಸಂಟ್ ಮೀಸಲಾತಿ ಕೊಟ್ಟಿದ್ದಾರೆ. ಸದಾಶಿವ ಆಯೋಗದಲ್ಲಿ ಮೂರು ಪರ್ಸಂಟ್ ಶಿಪಾರಸ್ಸು ಮಾಡಿದ್ದರು.
ನಮ್ಮದು ಬೇಡಿಕೆ ಇದ್ದಿದ್ದು ಎರಡು ಪರ್ಸಂಟ್ ಇತ್ತು.
ನಮ್ಮ ಬೇಡಿಕೆ ಇದ್ದಿದ್ದು ಬಂಜಾರ ಸಮುದಾಯವನ್ನ ಎಸ್‌ಸಿ ಮೀಸಲಾತಿಯಿಂದ ಕೈ ಬಿಡುವ ಸಂಚು ನಡೆದಿದೆ. ಇದಕ್ಕೆ ಲಿಖಿತವಾಗಿ ರಾಜ್ಯ ಸರ್ಕಾರ ಉತ್ತರ ಕೊಡಬೇಕು ಎನ್ನುವ ಬೇಡಿಕೆ ಇತ್ತು. ಹಿಂದಿನ ಸರ್ಕಾರದಿಂದ ಇದಕ್ಕೆ ಉತ್ತರ ಕೊಡುವ ಕೆಲಸ ಮಾಡಲಿಲ್ಲ. ಬೊಮ್ಮಾಯಿ ಅವರು ನ್ಯಾಷನಲ್ ಎಸ್‌ಸಿ‌ ಕಮಿಷನ್‌ಗೆ ಫೆ.16ರಂದು ಪತ್ರ ಬರೆದಿದ್ದರು. ಬಂಜಾರಾ, ಕೊರಚ, ಕೊರಮ, ಬೋವಿ ಇವು ಶಾಶ್ವತವಾಗಿ ಎಸ್‌ಸಿ ಪಟ್ಟಿಯಲ್ಲಿರುತ್ತೆ ತೆಗೆಯುವ ಪ್ರಸ್ತಾವನೆ ಇಲ್ಲಾ. ಈ ಕೆಲಸ ಯಾರು ಮಾಡಿರಲಿಲ್ಲ ಬೊಮ್ಮಾಯಿ ಅವರು ಮಾಡಿದ್ರೂ. ಸುಮ್ಮನೆ ಯಾರೋ ಗೊಂದಲ ಸೃಷ್ಟಿ ಮಾಡಲು. ಅವರಿವರ ಮನೆ ಮೇಲೆ ಕಲ್ಲು ಒಗೆಯುವ ಕೆಲಸ ಮಾಡ್ತಾರೆ. ಯಾರು ಕೂಡ ಗೊಂದಲಕ್ಕೆ ಒಳಗಾಗಬಾರದು. ನಮ್ಮ ಬೇಡಿಕೆಯನ್ನು ಬೊಮ್ಮಾಯಿ ಅವರು ಈಡೇರಿಸಿದ್ದಾರೆ ಎಂದು ಶಾಸಕರು ಮೀಸಲಾತಿ ಸಮರ್ಥನೆಯನ್ನು ಮಾಡಿದರು.