ಸರ್ ಸಿದ್ದಪ್ಪ ಕಂಬಳಿಯವರ ಅಗಣಿತ ಸೇವೆ ಎಂದು ಮರೆಯಲು ಸಾಧ್ಯವಿಲ್ಲ

Advertisement

ಹುಬ್ಬಳ್ಳಿ: ಕರ್ನಾಟಕ ಏಕೀಕರಣದಲ್ಲಿ ಪ್ರಮುಖ ಪಾತ್ರವಹಿಸಿದ ಸರ್ ಸಿದ್ದಪ್ಪ ಕಂಬಳಿ ಅವರಿಗೆ ಶತಕೋಟಿ ನಮನಗಳು ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಸರ್ ಸಿದ್ದಪ್ಪ ಕಂಬಳಿ ಮ್ಯೂಸಿಯಂಗೆ ಭೇಟಿ ನೀಡಿ ಸಾಮಾಜಿಕ ಜಾಲತಾಣದಲ್ಲಿ ಚಿತ್ರಗಳನ್ನು ಹಂಚಿಕೊಂಡಿರುವ ಅವರು ” ಸರ್ ಸಿದ್ದಪ್ಪ ತೋಟಪ್ಪ ಕಂಬಳಿಯವರ 141 ನೇ ಜಯಂತ್ಯೋತ್ಸವದ ಸ್ಮರಣಾರ್ಥ ಸ್ಥಾಪಿಸಲಾಗಿರುವ ಮ್ಯೂಸಿಯಂಗೆ ಭೇಟಿ ನೀಡಲಾಯಿತು.

ಸರ್ ಸಿದ್ದಪ್ಪ ತೋಟಪ್ಪ ಕಂಬಳಿಯವರ ಅಗಣಿತ ಸೇವೆಯನ್ನು ಎಂದು ಮರೆಯಲು ಸಾಧ್ಯವಿಲ್ಲ, ಧಾರವಾಡವನ್ನು ಶಿಕ್ಷಣ ಕಾಶಿಯನ್ನಾಗಿ ಮಾಡಲು ಸತತ ಪ್ರಯತ್ನವನ್ನು ಪಟ್ಟವರು,

ಕರ್ನಾಟಕ ಏಕೀಕರಣದಲ್ಲಿ ಪ್ರಮುಖ ಪಾತ್ರವಹಿಸಿದ ಸರ್ ಸಿದ್ದಪ್ಪ ಕಂಬಳಿ ಅವರಿಗೆ ಶತಕೋಟಿ ನಮನಗಳು” ಎಂದಿದ್ದಾರೆ.