ಸಿದ್ದರಾಮಯ್ಯ ಜೈಲಿನಲ್ಲಿರಬೇಕಾಗಿತ್ತು: ಮುನಿರತ್ನ

ಮುನಿರತ್ನ
Advertisement

ಇಡಿ ದಾಳಿ ಷಡ್ಯಂತ್ರ ಎನ್ನುವುದಾದರೆ ಇಷ್ಟೊತ್ತಿಗೆ ಸಿದ್ದರಾಮಯ್ಯನವರು ಜೈಲಿನಲ್ಲಿರಬೇಕಿತ್ತು ಎಂದು ಸಚಿವ ಮುನಿರತ್ನ ಹೇಳಿದ್ದಾರೆ.
ಕೋಲಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿಕೆಶಿ ಅವರ ಇಡಿ ವಿಚಾರಣೆ ಕುರಿತು ಪ್ರತಿಕ್ರಿಯಿಸಿ, ಡಿಕೆಶಿ ಸಿಎಂ ಅಭ್ಯರ್ಥಿ ಎಂದು ಅವರಿಗೆ ಇಡಿ ನೋಟಿಸ್​ ನೀಡಿಲ್ಲ. ಹಾಗೆ ನೋಟಿಸ್‌ ನೀಡುವುದಾಗಿದ್ದರೆ ಸಿದ್ದರಾಮಯ್ಯ ಕೂಡ ಸಿಎಂ ಅಭ್ಯರ್ಥಿ ಅವರಿಗೂ ನೋಟಿಸ್‌ ನೀಡಬೇಕಿತ್ತು. ವೈಯಕ್ತಿಕ ದ್ವೇಷ ಎನ್ನುವುದಾದರೆ ಸಿದ್ದರಾಮಯ್ಯ ಜೈಲಿನಲ್ಲಿರಬೇಕಾಗಿತ್ತು. ವಿಚಾರದಲ್ಲಿ ಯಾವುದೇ ಷಡ್ಯಂತ್ರದ ಪ್ರಶ್ನೆಯೇ ಇಲ್ಲ. ಎಲ್ಲವೂ ಕಾನೂನಿನ ಪ್ರಕಾರ ಆಗುತ್ತದೆ ಎಂದರು.