ಸುಳ್ಳೇ ನಿಮ್ಮನೆ ದೇವರು: ರವಿ ಟ್ವೀಟಾಸ್ತ್ರ

ಸಿ.ಟಿ. ರವಿ
Advertisement

ಬೆಂಗಳೂರು: ಸುಳ್ಳೇ ನಿಮ್ಮನೆ ದೇವರು ಎಂದು ಸಿದ್ದರಾಮಯ್ಯವರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಟ್ವೀಟಾಸ್ತ್ರ ಬಿಟ್ಟಿದ್ದಾರೆ. ಅಕ್ಕಿಯ ದಾಸ್ತಾನು ಇದ್ದರೂ ಕೊಡುತ್ತಿಲ್ಲ. ಈ ಬಗ್ಗೆ ಆಹಾರ ಇಲಾಖೆ ಮೂಲಕ ಹೇಳಿ ಬರೆಸಿದ್ದಾರೆ. ಇದು ಕೇಂದ್ರ ಬಿಜೆಪಿ ಸರ್ಕಾರದ ಷಡ್ಯಂತ್ರ ಎಂದು ಮಾಡಿದ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಅವರು
“ಸುಳ್ಳು ನಮ್ಮಲ್ಲಿಲ್ಲವಯ್ಯ ಸುಳ್ಳೇ ನಮ್ಮನೆ ದೇವರು ” ಎಂಬ ವಾಕ್ಯ ಸನ್ಮಾನ್ಯ ಸಿದ್ದರಾಮಯ್ಯ ಮುಖಕ್ಕೆ ಹಿಡಿದ ಕನ್ನಡಿಯಂತಿದೆ. ಪ್ರಧಾನಿ ನರೆಏಂದ್ರ ಮೋದಿಯವರ ಸರಕಾರದ ಗರೀಬ್ ಕಲ್ಯಾಣ್ ಅನ್ನ ಯೋಜನೆಯ ಮೂಲಕ ದೇಶದ ಎಲ್ಲ ಬಿಪಿಎಲ್ ಕುಟುಂಬಗಳಿಗೆ ನೀಡುವ ಐದು ಕೆಜಿ ಅಕ್ಕಿ ತಮ್ಮದೆಂದು ಯಾವುದೇ ಮುಜುಗರವಿಲ್ಲದೆ ಸುಳ್ಳು ಹೇಳುವುದು “ಸುಳ್ಳೇ ನಿಮ್ಮನೆ ದೇವರು”ಎಂಬುದಕ್ಕೆ ಸಾಕ್ಷಿಯಾಗಿದೆ. ಸಿದ್ದರಾಮಯ್ಯನವರೇ ರಾಜ್ಯದ ಜನತೆಗೆ ನೀವು ಕೊಡಬೇಕಾಗಿರುವುದು ಕೇಂದ್ರ ಸರಕಾರ ನೀಡುತ್ತಿರುವ ಐದು ಕೆಜಿ ಅಕ್ಕಿಯನ್ನು ಹೊರತುಪಡಿಸಿ ನೀವು ನೀಡಿದ ಗ್ಯಾರೆಂಟಿಯ 10KG ಅಕ್ಕಿ. ಹಿಂದಿನ ಬಾರಿಯಂತೆ ಅಕ್ಕಿ ನಿಂದು ಚೀಲ ನಂದು ಎಂದು ಜನರನ್ನು ಮೋಸ ಮಾಡಲು ಸಾಧ್ಯವಿಲ್ಲ ಎಂದು ಕುಟಕಿದ್ದಾರೆ.