ಸ್ಕೂಟಿಗೆ ಟಿಪ್ಪರ್ ಲಾರಿ ಡಿಕ್ಕಿ…

Advertisement

ಚಿಕ್ಕಬಳ್ಳಾಪುರ: ಸ್ಕೂಟಿಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಚಿಕ್ಕಬಳ್ಳಾಪುರದ ಶ್ರೀನಿವಾಸ ಡ್ಯಾಂ ನೋಡಲು ಬಂದಿದ್ದ ವಿದ್ಯಾರ್ಥನಿ ದಾರುವಣವಾಗಿ ಮೃತಪಟ್ಟಿದ್ದು, ಸ್ಕೂಟಿ ಓಡಿಸುತ್ತಿದ್ದ ಯುವಕನಿಗೆ ಗಂಭೀರ ಗಾಯವಾಗಿದೆ.

ಶೇಷಾದ್ರಿಪುರಂ ಕಾಲೇಜಿನ ಬಿಕಾಂ ವಿದ್ಯಾರ್ಥಿನಿ ಚೈತ್ರಾ ಮೃತಪಟ್ಟ ವಿದ್ಯಾರ್ಥಿನಿ. ಚೈತ್ರಾ ಮತ್ತು ಆಕೆಯ ಸ್ನೇಹಿತ ಲಿಖಿತ್ ಗೌಡ ಸ್ಕೂಟಿಯಲ್ಲಿ ಶ್ರೀನಿವಾಸ ಸಾಗರ ಡ್ಯಾಂಗೆ ತೆರಳಿದ್ದರು. ಡ್ಯಾಂ ನೋಡಿ ವಾಪಸ್ ಬರುವಾಗ ವಾಪಸಂದ್ರ ಬ್ರಿಡ್ಜ್ ಬಳಿ ಸ್ಕೂಟಿಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿದೆ. ಕೆಳಗೆ ಬಿದ್ದ ಚೈತ್ರಾ ತಲೆಯ ಮೇಲೆ ಲಾರಿ ಹರಿದಿದ್ದು, ಅಕೆ ಸ್ಥಳದಲ್ಲೇ ಮೃತಪಟ್ಟಿದ್ಧಾಳೆ.

ಇನ್ನು ಲಿಖಿತ್ ಗೌಡಗೆ ಗಂಭೀರ ಗಾಯಗಳಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಾರಿ ಭಾರಿ ಮಳೆಯಿಂದಾಗಿ ಶ್ರೀನಿವಾಸ ಸಾಗರ ಡ್ಯಾಂ ತುಂಬಿ ಕೋಡಿ ಬಿದ್ದಿರುವ ಹಿನ್ನೆಲೆಯಲ್ಲಿ ಸಾವಿರಾರು ಪ್ರವಾಸಿಗರು ಡ್ಯಾಂಗೆ ಭೇಟಿ ನೀಡುತ್ತಿರುತ್ತಾರೆ.