ಹಿಪ್ಪರಗಿ ಜಲಾಶಯಕ್ಕೆ 1 ಲಕ್ಷ 2 ಸಾವಿರ ಕ್ಯೂಸೆಕ್ ನೀರು

Advertisement

ಬಾಗಲಕೋಟೆ: ನೆರೆಯ ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ಎಡೆಬಿಡದೇ ಸುರಿಯುತ್ತಿರುವ ಭಾರಿ ಮಳೆಯಿಂದ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ಸಮೀಪದ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರಲಾರಭಿಸಿದೆ.

ಇದೇ ರೀತಿ ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆ ಮುಂದುವರೆದರೇ ಕೃಷ್ಣಾ ನದಿ ತನ್ನ ರುದ್ರ ನರ್ತನಹೆಚ್ಚಿಸುವ ಸಾಧ್ಯತೆ ಇದೆ.

ಇಂದು ತಾಲೂಕಿನ ಹಿಪ್ಪರಗಿ ಜಲಾಶಯದ ಒಳಹರಿವು 1 ಲಕ್ಷ 2 ಸಾವಿರ ಕ್ಯುಸೆಕ್ ಇದ್ದು, 1 ಲಕ್ಷ 2 ಸಾವಿರ ಕ್ಯೂಸೆಕ್ಸ್ ಹೊರ ಹರಿವು ಇದೆ. ನೀರಿನ ಮಟ್ಟ 521.35 ಮೀ. ದಾಖಲಾಗಿದೆ ಎಂದು ರಬಕವಿ-ಬನಹಟ್ಟಿ ತಹಶೀಲ್ದಾರ ಡಾ. ಡಿ. ಎಚ್. ಹೂಗಾರ ತಿಳಿಸಿದ್ದಾರೆ.

ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಕೊಯ್ನಾ: 150 ಮಿ.ಮೀ, ನವುಜಾ: 214 ಮಿ.ಮೀ, ಮಹಾಬಳೇಶ್ವರ: 189 ಮಿ.ಮೀ, ರಾಧಾ ನಗರಿ:142 ಮಿ.ಮೀ, ವಾರಣಾ: 76 ಮಿ.ಮೀ, ದೂಧಗಂಗಾ: 97 ಮಿ. ಮೀ, ತರಳಿ: 56 ಮಿ. ಮೀ ಮಳೆಯಾದ ವರದಿಯಾಗಿದೆ.

ರಾಜಾಪೂರ ಬ್ಯಾರೇಜನಿಂದ 87 ಸಾವಿರದಾ 500 ಕ್ಯೂಸೆಕ್ಸ್ ನೀರು ಬಿಡಲಾಗುತ್ತಿದೆ ಎಂದು ಹಿಪ್ಪರಗಿ ಜಲಾಶಯದ ಸಹಾಯಕ ಅಭಿಯಂತರ ವಿಠ್ಠಲ ನಾಯಕ ತಿಳಿಸಿದರು.