ಹುಚ್ಚು ನಾಯಿ ಕಚ್ಚಿದ್ದ ಮಗು ಸಾವು

Advertisement


ಬಳ್ಳಾರಿ : ಹುಚ್ಚು ನಾಯಿಯೊಂದು ಕಚ್ಚಿ ತೀರ್ವವಾಗಿ ಗಾಯಗೊಂಡಿದ್ದ ತೊಯ್ಬಾ (3) ಎಂಬ ಹೆಚ್ಚು ಮಗು ಇಂದು ಬೆಳಿಗ್ಗೆ ಮೃತ ಪಟ್ಟಿದೆ. ಸಂಜೆ ಅಂತ್ಯಕ್ರಿಯೆ ನಡೆಸಲಾಗಿದೆ.
ಇಲ್ಲಿನ ಕೌಲ್ ಬಜಾರ್ ಪ್ರದೇಶದ ವಟ್ಟಪ್ಪಗೇರಿಯಲ್ಲಿ ಹುಚ್ಚುನಾಯಿ ಫೆ.6 ರಂದು ಸೋಮವಾರ ರಾತ್ರಿಯಿಂದ 7 ರಂದು ಬೆಳಿಗ್ಗೆ ವರೆಗೆ ಸುಮಾರು 30 ಜನರಿಗೆ ಕಚ್ಚಿತ್ತು. ಇವರಲ್ಲಿ ತೊಯ್ಬಾಳಿಗೆ ಮುಖಕ್ಕೆ ಕಚ್ಚಿ ಗಾಯ ಮಾಡಿತ್ತು. ಮಗುವನ್ನು ವಿಮ್ಸ್ ಗೆ ದಾಖಲಿಸಿ ಚಿಕಿಕ್ಸೆ ನೀಡಲಾಗಿತ್ತು. ಬಳಿಕ ಪರಿಸ್ಥಿತಿ ಬಿಗಡಾಯಿಸಿದ್ದರಿಂದ ಬೆಂಗಳೂರಿನ ನಿಮ್ಹಾನ್ಸ್ ಗೆ ಕಳುಹಿಸಿಲಾಗಿತ್ತು. ಅಲ್ಲಿನ ವೈದ್ಯರು ಮಗು ಬದುಕಿ ಉಳಿಯುವುದು ಕಷ್ಟ ಎಂದು ಹೇಳಿದ್ದರಿಂದ ಬಳ್ಳಾರಿಗೆ ವಾಪಾಸ್ಸು ಕರೆ ತರಲಾಗಿತ್ತು.
ಜಿಲ್ಲೆಯಲ್ಲಿ ಹುಚ್ಚು ನಾಯಿಗೆ ಮಗು ಬಲಿಯಾದ ಮೂರನೇ ಪ್ರಕರಣ ಇದಾಗಿದ್ದು, ನ.21 ಮತ್ತು 22 ರಂದು ಕುರುಗೋಡು ತಾಲ್ಲೂಕಿನ ಬಾದನಹಟ್ಟಿಯಲ್ಲಿ ಸುರಕ್ಷಿತ (3) ಮತ್ತು ಶಾಂತಕುಮಾರ್ (7) ಎಂಬ ಮಕ್ಕಳು ಮೃತಪಟ್ಟಿದ್ದನ್ನು ಸ್ಮರಿಸಬಹುದು.