ಹುಬ್ಬಳ್ಳಿ-ಧಾರವಾಡದಲ್ಲೇಕೆ ಪೇ ಮೇಯರ್

Pay Mayor
Advertisement

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಪೌರ ಸನ್ಮಾನ ಸೆಪ್ಟೆಂಬರ್ 26ರಂದು ಹುಬ್ಬಳ್ಳಿಯಲ್ಲಿ ಮಹಾನಗರ ಪಾಲಿಕೆಯಿಂದ ಏರ್ಪಾಡಾಗಿತ್ತು. ಈ ಸನ್ಮಾನ ಸಮಾರಂಭದ ಪೆಂಡಾಲ್ ನಿರ್ಮಾಣ ಸೇರಿದಂತೆ ಇತರ ಪೂರಕ ಕಾಮಗಾರಿಗಳ ಟೆಂಡರ್‌ನಲ್ಲಿ ಆಡಳಿತಾರೂಢ ಬಿಜೆಪಿ ಅಕ್ರಮ ಎಸಗಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಮೇಯರ್ ಅವರೇ ಅಕ್ರಮಕ್ಕೆ ಹೊಣೆ; ನಿಯಮ ಮೀರಿ ಟೆಂಡರ್ ಪ್ರಕ್ರಿಯೆ ನಡೆದಿದೆ ಎಂದಿತ್ತು. ತನ್ನ ಆರೋಪದ ಮುಂದುವರಿದ ಭಾಗವಾಗಿ ಕಾಂಗ್ರೆಸ್ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ವಿರುದ್ಧ ನಡೆಸಿದಂತಹ ಅಭಿಯಾನದ ಮಾದರಿಯಲ್ಲೇ ಪೇ ಮೇಯರ್ ಆರಂಭಿಸಿದೆ.