ಹೃದಯಾಘಾತದಿಂದ ಎಎಸ್ಐ ಸಾವು

Advertisement

ಹುಬ್ಬಳ್ಳಿ: ಪೊಲೀಸ್ ವಸತಿ ಗೃಹದಲ್ಲಿ ತೀವ್ರ ಹೃದಯಘಾತದಿಂದ ಗೋಕುಲ ಪೊಲೀಸ್ ಠಾಣೆ ಎಎಸ್ ಐ ಸಾವನ್ನಪ್ಪಿದ್ದಾರೆ
ಎಎಸ್ ಐ ಚಂದ್ರು ಚಲವಾದಿ ಮೃತರಾದವರು. ಇಲ್ಲಿನ ಕಾರವಾರ ರಸ್ತೆಯ ಹುಬ್ಬಳ್ಳಿ ಪೊಲೀಸ್ ಕ್ವಾಟರ್ಸ್‌ನಲ್ಲಿ ಘಟನೆ ನಡೆದಿದೆ.
1994ನೇ ಬ್ಯಾಚಿನ ಚಂದ್ರು ಚೆಲವಾದಿ ಎಂಬುವವರೇ ನಿಧನರಾಗಿದ್ದು, ಗೋಕುಲ ಪೊಲೀಸ್ ಠಾಣೆಯಲ್ಲಿ ಎಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಚಂದ್ರು ಅವರು ಮೂಲತಃ ಮುಳಗುಂದದವರಾಗಿದ್ದು, ಎರಡು ಮಕ್ಕಳನ್ನ ಹೊಂದಿದ್ದರು.