ಧಾರವಾಡ ಬಳಿ ಭೀಕರ ಅಪಘಾತ: ಐವರ ಸಾವು

ಧಾರವಾಡ
Advertisement

ಧಾರವಾಡ: ತಾಲೂಕಿನ ತೇಗೂರ ಬಳಿ ರಾಷ್ಟ್ರೀಯ ಹೆದ್ದಾರಿ-೪ರಲ್ಲಿ ಗುರುವಾರ ರಾತ್ರಿ ಟ್ರಕ್ ಹಾಗೂ ಕಾರಿನ ಮಧ್ಯೆ ನಡೆದ ಅಪಘಾತದಲ್ಲಿ ಸ್ಥಳದಲ್ಲೇ ಐವರು ಮೃತಪಟ್ಡು, ನಾಲ್ವರು ಗಾಯಗೊಂಡ ಘಟನೆ ನಡೆದಿದೆ.
ಕಾರಿನಲ್ಲಿ ಸಂಚರಿಸುತ್ತಿದ್ದ ಬಾಲಕ ಸೇರಿದಂತೆ ನಾಲ್ವರು ಮೃತಪಟ್ಟರೆ, ಪಾದಚಾರಿಗೆ ಕಾರು ತಾಗಿ ಆತ ಕೂಡ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.
ಮೃತರನ್ನು ನಾಗಪ್ಪ ಈರಪ್ಪ ಮುದ್ದೊಜಿ (೨೯), ಅವರಾದಿ ಗ್ರಾಮದ ಮಹಂತೇಶ ಬಸಪ್ಪ ಮುದ್ದೊಜಿ (೪೦), ಬಸವರಾಜ ಶಿವಪುತ್ರಪ್ಪ ನರಗುಂದ(೩೫), ನಿಚ್ಚಣಕಿ ಗ್ರಾಮದ ಶ್ರೀಕುಮಾರ ನರಗುಂದ (೦೫), ಪಾದಚಾರಿ ಹೆಬ್ಬಳ್ಳಿ ನಿವಾಸಿ ಈರಣ್ಣ ಗುರುಸಿದ್ದಪ್ಪ ರಾಮನಗೌಡರ (೩೫) ಎಂದು ಗುರುತಿಸಲಾಗಿದೆ.
ಅಪಘಾತದಲ್ಲಿ ಶ್ರವಣಕುಮಾರ್ ಬಸವರಾಜ ನರಗುಂದ(೭), ಅವರಾದಿಯ ಮಡಿವಾಳಪ್ಪ ರಾಜು ಅಳ್ನಾವರ (೨೨), ಪ್ರಕಾಶ್ ಗೌಡ ಶಂಕರಗೌಡ ಪಾಟೀಲ್ (೨೨), ಅವರಾದಿ ಗ್ರಾಮದ ಮಂಜುನಾಥ ಮಹಾಂತೇಶ ಮುದ್ದೋಜಿ (೨೨) ಗಾಯಗೊಂಡಿದ್ದಾರೆ.
ಕಾರು ಬೆಳಗಾವಿಯಿಂದ ಧಾರವಾಡಕ್ಕೆ ಬರುತ್ತಿತ್ತು. ಗರಗ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಂಡಿದ್ದಾರೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.