ಮುಸ್ಲಿಮರು ವೋಟ್‌ ಹಾಕದೇ ಇದ್ದರೆ ಬಿಜೆಪಿಗೆ ಲಾಭ

ಜಮೀರ್
Advertisement

ಬಾಗಲಕೋಟೆ: ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ವೋಟು ಹಾಕಬೇಕು. ನೀವು ವೋಟ್‌ ಹಾಕದೇ ಇದ್ದರೆ ಬಿಜೆಪಿಗೆ ಲಾಭವಾಗಲಿದೆ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಹೇಳಿದರು.
ಜಮಖಂಡಿಯಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯ ಸಮಾವೇಶದಲ್ಲಿ ಮಾತನಾಡಿದ ಅವರು, ಹಿಂದೂ-ಮುಸ್ಲಿಂ ಜನರ ನಡುವೆ ಜಗಳ ತಂದಿಟ್ಟು ಬಿಜೆಪಿಯವರು ಮತ ಕೇಳುತ್ತಾರೆ ಹೊರತು ತಮ್ಮ ಸಾಧನೆ ಮೇಲೆ ಮತಗಳನ್ನು ಕೇಳುವುದಿಲ್ಲ ಎಂದರು.
ನನ್ನ ಕ್ಷೇತ್ರದಲ್ಲಿ ಸಮ್ಮಿಶ್ರ ಸರ್ಕಾರದ ಆಡಳಿತದಲ್ಲಿ 190 ಕೋಟಿ ರೂ. ಅನುದಾನ ತಂದಿದ್ದೆ. ಆದರೆ, ಬಿಜೆಪಿ ಸರ್ಕಾರ ಬಂದ ಮೇಲೆ ಆ ಹಣವನ್ನು ಕೊಡಲಿಲ್ಲ. ನಂತರ 20% ಕಮಿಷನ್ ಪಡೆದು 80 ಲಕ್ಷ ರೂ. ಅನುದಾನ ಕೊಟ್ಟಿದ್ದಾರೆ ಎಂದು ಕಿಡಿಕಾರಿದರು.