ನೀರಿಗಾಗಿ ಕಾಂಗ್ರೆಸ್ ಬಿಜೆಪಿ ಮಧ್ಯೆ ಜಟಾಪಟಿ

Advertisement

ಧಾರವಾಡ: ಅವಳಿ ನಗರದಲ್ಲಿ ನೀರು ಪೂರೈಕೆಯಲ್ಲಿ ತೊಂದರೆ ಆಗುತ್ತಿರುವುದನ್ನು ವಿರೋಧಿಸಿ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಕಾಂಗ್ರೆಸ್ ಸದಸ್ಯರು ಕೈ ಕೈ ಮಿಲಾಯಿಸಿದ್ದಾರೆ. ಸಾಮಾನ್ಯ ಸಭೆ ಪ್ರಾರಂಭವಾಗುತ್ತಿದ್ದಂತೆ ಮಹಾಪೌರ ಈರೇಶ ಅಂಚಟಗೇರಿ ಅವರನ್ನು ಸಭೆಗೆ ಬಾರದಂತೆ ಸಭಾಭವನದ‌ ಬಾಗಿಲಲ್ಲಿಯೇ ಕಾಂಗ್ರೆಸ್ ಸದಸ್ಯರು ತಡೆದರು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರೊಬ್ಬರು ಮಹಿಳಾ ಸದಸ್ಯರು ಎಂದು ಲೆಕ್ಕಿಸದೇ ತಳ್ಳಾಡಿದ ಪ್ರಸಂಗ‌ ಕಂಡು ಬಂದಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್‌ನ ಸುವರ್ಣ ಮಣಿಕುಂಟ್ಲ ಅವರು ಕೆಳಗೆ ಬಿದ್ದು ಅಸ್ವಸ್ಥರಾದ ಸನ್ನಿವೇಶ ಕಂಡುಬಂದಿತು. ನಂತರ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರು.