500 ರೂ. ಕೊಟ್ಟು ಜನರನ್ನ ಕರ್ಕೊಂಡ ಬನ್ನಿ..!.

Advertisement

ಬೆಳಗಾವಿ: ಅಭಿವೃದ್ಧಿ ಮೂಲಕ ಮತದಾರನನ್ನು ಸೆಳೆಯಬೇಕಾಗಿದ್ದ ರಾಜಕೀಯ ಪಕ್ಷಗಳು ಈಗ ಹಣ ನೀಡಿ ಖರೀಸುವ ದುಸ್ಸಾಹಸಕ್ಕೆ ಕೈ ಹಾಕಿವೆ.
ಕಳೆದ ದಿನ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಕಾಂಗ್ರೆಸ್ ನ‌ ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಆಡಿದ ಮಾತುಗಳು ಈಗ ಇದಕ್ಕೆಲ್ಲ ಸಾಕ್ಷಿಯಾಗತೊಡಗಿವೆ.
ಪ್ರಜಾಧ್ವನಿ ಯಾತ್ರೆಯ ಸಂದರ್ಭದಲ್ಲಿ ವಾಹನದಲ್ಲಿ ಹೋಗುತ್ತಿದ್ದಾಗ ಸಿದ್ದರಾಮಯ್ಯನವರು ನಿಮ್ಮ ಕ್ಷೇತ್ರ ಅಷ್ಟೇ ಅಲ್ಲ ಬೇರೆಯವರನ್ನೂ 500 ರೂ. ಕೊಟ್ಟು ಕರ್ಕೊಂಡ ಬನ್ನಿ ಎಂದು ಹೇಳಿದ ವಿಡಿಯೋ‌ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಾಜಹಂಸಗಡ ಶಿವಾಜಿ‌ ಮಹಾರಾಜರ ಪ್ರತಿಮೆ‌ ಅನಾವರಣಕ್ಕೆ ಬಿಜೆಪಿಯವರು ಜನರನ್ನು ಸೇರಿಸುತ್ತಾರೆ. ಆದ್ದರಿಂದ ನೀವೂ 500 ರೂ. ಕೊಟ್ಟು ಕರ್ಕೊಂಡ ಬನ್ನಿ ಎಂದು ಹೆಬ್ಬಾಳಕರಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಹೆಬ್ಬಾಳಕರ ಅವರು ಅಲ್ಲಿಯೇ ಕುಳಿತಿದ್ದ ಸತೀಶ ಜಾರಕಿಹೊಳಿಗೆ ನೀವೂ ಜನರನ್ನು ಕಳಿಸಿ ಎಂದು ಹೇಳಿದರು
ಈ ಸಂದರ್ಭದಲ್ಲಿ ಕೋನರೆಡ್ಡಿ‌ ಸೇರಿದಂತೆ ಇತರರು ಇದ್ದರು.