ಸಚಿವ ಮುನಿರತ್ನ ಮೇಲೆ 40% ಕಮಿಷನ್ ಆರೋಪ..!

Advertisement

ಬೆಂಗಳೂರು : ಸಚಿವ ಮುನಿರತ್ನ ಮೇಲೆ 40% ಕಮಿಷನ್ ಆರೋಪವಿದ್ದು, ಸಚಿವ ಮುನಿರತ್ನ ಗುತ್ತಿಗೆದಾರರ ಸಂಘಕ್ಕೆ ನೋಟಿಸ್ ಕಳಿಸಿದ್ಧಾರೆ.

ಕೋಲಾರ ಉಸ್ತುವಾರಿ ಸಚಿವರ‌ ಮೇಲೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪ ಮಾಡಿದ್ದರು, ಮುನಿರತ್ನ ರಿಜಿಸ್ಟರ್ ಪೋಸ್ಟ್ ಮೂಲಕ ನೋಟಿಸ್ ರವಾನೆ ಮಾಡಿದ್ಧಾರೆ. ಮುನಿರತ್ನ ಕೆಂಪಣ್ಣಗೆ ಏಳು ದಿನಗಳ ಕಾಲವಕಾಶ ಕೊಟ್ಟಿದ್ಧಾರೆ.

ನಿನ್ನೆ ರಿಜಿಸ್ಟರ್ ಪೋಸ್ಟ್ ಮೂಲಕ ನೋಟಿಸ್ ರವಾನೆಯಾಗಿದ್ದು, ಇಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ನೋಟಿಸ್ ಸ್ವೀಕರಿಸಲ್ಲಿದ್ಧಾರೆ. ನೋಟಿಸ್​ನಲ್ಲಿ ಬಹಿರಂಗವಾಗಿ ಕ್ಷಮಾಪಣೆ ಕೇಳಬೇಕು ಇಲ್ಲವಾದಲ್ಲಿ ಮಾಧ್ಯಮಗಳ ಮುಂದೆ ದಾಖಲೆ ಬಿಡುಗಡೆ ಮಾಡಿ ಎಂದು ತಿಳಿಸಿದ್ಧಾರೆ. ಸಚಿವ ಮುನಿರತ್ನ ಕಮಿಷನ್ ಆರೋಪಕ್ಕೆ ಕೆಂಪಣ್ಣ ವಿರುದ್ದ ನ್ಯಾಯಾಂಗ ಹೋರಾಟಕ್ಕೆ ಸಜ್ಜಾಗಿದ್ಧಾರೆ.