ಅಭ್ಯರ್ಥಿ ಆಯ್ಕೆಗೆ ಬಿಜೆಪಿ ಆಂತರಿಕ ಚುನಾವಣೆ

ಶೆಟ್ಟರ್
Advertisement

ಬಾಗಲಕೋಟೆ: ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಅಭ್ಯರ್ಥಿಗಳ ಆಯ್ಕೆಗಾಗಿ ಆಂತರಿಕ ಚುನಾವಣೆ ನಡೆಯಿತು.
ವೀಕ್ಷಕರಾಗಿ ಮಾಜಿ ಸಚಿವ ‌ಜಗದೀಶ ಶೆಟ್ಟರ್, ಬೆಳಗಾವಿ ಶಾಸಕ ಅಭಯ ಪಾಟೀಲ ಆಗಮಿಸಿದ್ದರು. ಬೆಳಗ್ಗೆ ೧೦ರಿಂದ ಮಧ್ಯಾಹ್ನ ೩ರವರೆಗೆ ಜಿಲ್ಲೆಯ ೭ ಕ್ಷೇತ್ರಗಳ ಮತದಾನ‌ ಜರುಗಿತು.
ಚುನಾವಣಾ ಪ್ರಕ್ರಿಯೆ ‌ಕುರಿತು ಮಾಹಿತಿ ನೀಡಿದ ಜಗದೀಶ ಶೆಟ್ಡರ್, ಅಮಿತ್ ಶಾ ಅವರು ಇತ್ತಿಚೇಗೆ ಬೆಂಗಳೂರಿನಲ್ಲಿ ಕೋರ್ ಕಮಿಟಿ ಸಭೆ ನಡೆಸಿದ ವೇಳೆ ಎಲ್ಲ ಜಿಲ್ಲೆಗಳಲ್ಲಿ ಪದಾಧಿಕಾರಿಗಳಿಂದ ಗೌಪ್ಯ ಮಾಹಿತಿಯನ್ನು ಸಂಗ್ರಹಿಸಿ ನೀಡುವಂತೆ ‌ಸೂಚಿಸಿದ್ದರು ಅದರಂತೆ ಚುನಾವಣಾ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದರು.

ನೇಕಾರರಿಗೆ ಟಿಕೆಟ್: ಪ್ರತಿಭಟನೆ
ತೇರದಾಳ ವಿಧಾನಸಭಾ ಕ್ಷೇತ್ರದಿಂದ ಈ ಬಾರಿಗೆ ನೇಕಾರ ಸಮುದಾಯದವರಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿ ಆಕಾಂಕ್ಷಿ ರಾಜು ಅಂಬಲಿ ನೇತೃತ್ವದಲ್ಲಿ ಬಿಜೆಪಿ ‌ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಆಂತರಿಕ ಚುನಾವಣೆ