ಐದು ರೂಪಾಯಿಗಾಗಿ ಕೊಲೆ: ಆರೋಪಿ ರವಿ ಬಳ್ಳಾರಿ ಅಂದರ್…

ಆರೋಪಿ ರವಿ ಬಳ್ಳಾರಿ..
ಆರೋಪಿ ರವಿ ಬಳ್ಳಾರಿ..
Advertisement

ಹುಬ್ಬಳ್ಳಿ: ಕೇವಲ ಐದು ರೂಪಾಯಿಗಾಗಿ ೮ ವರ್ಷದ ಬಾಲಕನನ್ನು ಬರ್ಬರವಾಗಿ ಕೊಲೆ ಮಾಡಿ, ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ೪೮ ಗಂಟೆಯೊಳಗೆ ಬಂಧಿಸುವಲ್ಲಿ ಬೆಂಡಿಗೇರೆ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಉಣಕಲ್ಲ ಸಾಯಿನಗರದ ನದೀಮ್‌ಸಾಬ್ ಹುಬ್ಬಳ್ಳಿ (೮) ಮಾ.೩೧ ರಂದು ದೊಡ್ಡಮನಿ ಚಾಳದ ಮಿರ್ಚಿ ಮೈದಾನದಲ್ಲಿನ ಜಾಲಿ ಕಂಟಿಗಳ ನಡುವೆ ಅರೆನಗ್ನ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ದೇಹದ ಮೇಲೆ ಕೆಲವು ಗಾಯಗಳಾಗಿದ್ದು, ಮುಖದ ಮೇಲೆ ಕಲ್ಲಿನಿಂದ ಜಜ್ಜಿದ ಬಲವಾದ ಗಾಯಗಳಿದ್ದವು. ಇದನ್ನ ಪರಿಶೀಲೀಸಿದ ಬೆಂಡಿಗೇರಿ ಠಾಣೆ ಪೊಲೀಸರು, ಇದು ಕೊಲೆ ಎಂಬ ತೀರ್ಮಾನಕ್ಕೆ ಬಂದಿದ್ದರು. ಬಾಲಕನ ಪರಿಚಯಸ್ಥರೇ ಕೃತ್ಯ ಎಸಗಿರುವ ಬಗ್ಗೆ ಸಂದೇಹ ವ್ಯಕ್ತಪಡಿಸಿ ತನಿಖೆ ಕೈಗೊಂಡಿದ್ದರು.
ತನಿಖೆ ಕೈಗೊಂಡ ಪೊಲೀಸರು, ಹಲವರ ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ಸೆಟಲಮೆಂಟ್ ನಿವಾಸಿ ರವಿ ಬಳ್ಳಾರಿ ಮೇಲೆ ಸಂದೇಹ ಮೂಡಿತ್ತು. ಆರೋಪಿ ರವಿಯನ್ನು ಠಾಣೆಗೆ ಕರೆತಂದು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ, ಐದು ರೂಪಾಯಿಗೋಸ್ಕರ ಬಾಲಕನ ಕೊಲೆ ಮಾಡಿರೋದಾಗಿ ಒಪ್ಪಿಕೊಂಡಿದ್ದಾನೆ.
ಕೊಲೆಯಾದ ನದೀಮ್‌ಸಾಬ್ ರಜೆ ವೇಳೆ ಸೆಟಲ್ಮೆಂಟ್ ನಲ್ಲಿರುವ ಅಜ್ಜಿಯ ಮನೆಗೆ ಬರುತ್ತಿದ್ದ. ಹೀಗಾಗಿ ಅದೇ ಬಡಾವಣೆಯ ನಿವಾಸಿ, ಆರೋಪಿ ರವಿ ಬಳ್ಳಾರಿಗೆ ಮೃತ ನದೀಮ್ ಪರಿಚಯವಿತ್ತು. ಇದೇ ಸಲಿಗೆಯಿಂದ ಬಾಲಕ ರವಿ ಬಳಿ ಕುರುಕಲು ತಿಂಡಿಗಾಗಿ ೫ ರೂ. ಬೇಡಿದ್ದ. ಗೊಣಗಾಡುತ್ತ ಐದು ರೂ. ನೀಡಿದ್ದ ರವಿಗೆ ಬಾಲಕ ಮತ್ತೆ ಐದು ರೂಪಾಯಿ ಕೇಳಿದಾಗ ಪಿತ್ತ ನೆತ್ತಿಗೇರಿದೆ. ಕೋಪಗೊಂಡ ರವಿ ಬಾಲಕನ ಕೆನ್ನೆಗೆ ಜೋರಾಗಿಯೇ ಬಾರಿಸಿದ್ದ. ಹೊಡೆತದ ರಭಸಕ್ಕೆ ಬಾಲಕ ಮೂರ್ಚೆ ಹೋಗಿದ್ದ. ಇದನ್ನ ನೋಡಿದ ರವಿ ಗಾಬರಿಗೊಂಡು, ನಿರ್ಜನ ಪ್ರದೇಶಕ್ಕೆ ಬಾಲಕನನ್ನು ಕರೆದೊಯ್ದೆ, ಮುಖಕ್ಕೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದ. ಅಲ್ಲದೆ, ಅನುಮಾನ ಬಾರದಂತೆ ಬಾಲಕನ ಬಟ್ಟೆ ಬಿಚ್ಚಿ ಪರಾರಿಯಾದದ್ದ ಕಿಲ್ಲರ್ ರವಿ.