ವಿಚಾರಣೆ ವೇಳೆ ಮೌನಕ್ಕೆ ಶರಣಾದ ಮುರುಘಾಶ್ರೀ..!

Advertisement

ಚಿತ್ರದುರ್ಗ : ಮುರುಘಾಶ್ರೀಗಳು ವಿಚಾರಣೆ ವೇಳೆ ಮೌನಕ್ಕೆ ಶರಣಾಗಿದ್ದು, ತನಿಖಾಧಿಕಾರಿ DYSP ಅನಿಲ್ ಕುಮಾರ್​ ವಿಚಾರಣೆ ವೇಳೆ ಬಹುತೇಕ ಪ್ರಶ್ನೆಗಳಿಗೆ ಶ್ರೀಗಳ ಉತ್ತರ ಮೌನವೇ ಆಗಿತ್ತು. ಸಂತ್ರಸ್ತ ಬಾಲಕಿಯರು ನೀಡಿದ 164 ಹೇಳಿಕೆಯಡಿ ಶ್ರೀಗಳಿಗೆ ಪ್ರಶ್ನೆ ಕೇಳಲಾಗಿದೆ. ವಿಚಾರಣೆ ವೇಳೆ ತನಿಖಾಧಿಕಾರಿ ಸ್ವಾಮೀಜಿಗೆ 80ಕ್ಕೂ ಹೆಚ್ಚು ಪ್ರಶ್ನೆ ಕೇಳಿದ್ಧಾರೆ. ತನಿಖಾಧಿಕಾರಿಗಳು ಇಡೀ ವಿಚಾರಣೆ ವಿಡಿಯೋ ರೆಕಾರ್ಡ್ ಮಾಡಿದ್ಧಾರೆ.