ಚರಂಡಿ ಕಾಮಗಾರಿಗೆ 10 ಲಕ್ಷ ಅನುದಾನ

ಬಸನಗೌಡ ಪಾಟೀಲ
ವಿಜಯಪುರದಲ್ಲಿ ವಿವಿಧ ಪ್ರಗತಿ ಕಾಮಗಾರಿಗಳಿಗೆ ಚಾಲನೆ ನೀಡಲು ಆಗಮಿಸಿದ ಸಂದರ್ಭದಲ್ಲಿ ನಗರ ಶಾಸಕ ಬಸನಗೌಡ ಪಾಟೀಲ ಸಾರ್ವಜನಿಕರ ಜೊತೆ ಸಮಾಲೋಚನೆ ನಡೆಸಿದರು.
Advertisement

ವಿಜಯಪುರ: ವೆಂಕಟೇಶ ನಗಗರ, ಲಕ್ಷ್ಮೀನಗರ ಮೊದಲಾದ ಬಡಾವಣೆಗಳಿಗೆ ಅನುಕೂಲವಾಗಲು ಚರಂಡಿ ಕಾಮಗಾರಿ ಕೈಗೊಳ್ಳಲು 10 ಲಕ್ಷ ರೂ. ಅನುದಾನವನ್ನು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಭರವಸೆ ನೀಡಿದರು.
ವಿಜಯಪುರದ ವಾರ್ಡ್ ನಂ. 21ರ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ತುರ್ತು ಚರಂಡಿ ಕಾಮಗಾರಿಗೆ ಮಂಜೂರು ಮಾಡಲು ಮಹಾನಗರ ಪಾಲಿಕೆ ಅಭಿಯಂತರರಿಗೆ ಸೂಚನೆ ನೀಡಿದರು. ವಿಜಯಪುರ ನಗರದಲ್ಲಿ ಬರುವಂತಹ ಎಲ್ಲಾ ವಾರ್ಡ್‌ಗಳಿಗೆ ಕುಡಿಯುವ ನೀರು ಒಳಚರಂಡಿ ಸಿ.ಸಿ. ರಸ್ತೆಗಳನ್ನು ಸುಸಜ್ಜಿತತವಾಗಿ ರೂಪಿಸಲಾಗುತ್ತಿದೆ ಎಂದರು.
ಮಹಾಲಕ್ಷ್ಮೀ ಪ್ರಾಥಮಿಕ ಶಾಲೆ ಅಧ್ಯಕ್ಷ ಬಸವರಾಜ ನವಲಿ, ಬಿಜೆಪಿ ಯುವ ನಾಯಕ ಸಂತೋಷ ಕುಮಾರ ತಳಕೇರಿ, ಪಾಲಿಕೆ ಮಾಜಿ ಸದಸ್ಯ ಪ್ರೇಮಾನಂದ ಬಿರಾದಾರ, ಗುರುದೇವ ಅಂಗಡಿ, ಎಂ.ಎಸ್. ಮಠ, ಪ್ರವೀಣ ಕಿಚಡಿ, ಶಿವಾನಂದ ಶಾಸ್ತ್ರಿಗಳು, ಎಂಭತ್ನಾಳ ಪೋಲಿಸ್, ರಮೇಶ ಮುಳವಾಡ, ಆರ್.ಬಿ.ಮಠ, ಸಿ.ಜಿ. ಡೊಮನಾಳ, ಅಶೋಕ ಗುಂಡಳ್ಳಿ, ಗೀರಿಶ ಚಿಮ್ಮಲಗಿ ಇದ್ದರು.

ಬಸನಗೌಡ ಪಾಟೀಲ
ವಿಜಯಪುರದಲ್ಲಿ ವಿವಿಧ ಪ್ರಗತಿ ಕಾಮಗಾರಿಗಳಿಗೆ ಚಾಲನೆ ನೀಡಲು ಆಗಮಿಸಿದ ಸಂದರ್ಭದಲ್ಲಿ ನಗರ ಶಾಸಕ ಬಸನಗೌಡ ಪಾಟೀಲ ಸಾರ್ವಜನಿಕರ ಜೊತೆ ಸಮಾಲೋಚನೆ ನಡೆಸಿದರು.