28ರಂದು ಕುಷ್ಟಗಿಗೆ ರಾಹುಲ್ ಗಾಂಧಿ

ರಾಹುಲ್‌
Advertisement

ಕುಷ್ಟಗಿ: ಪಟ್ಟಣಕ್ಕೆ ಕಾಂಗ್ರೆಸ್ ಪಕ್ಷದ ವರಿಷ್ಠ ಆಗಿರುವಂತ ರಾಹುಲ್ ಗಾಂಧಿ ಅವರು ಏ. ೨೮ ರಂದು ಕುಷ್ಟಗಿ ಪಟ್ಟಣಕ್ಕೆ ಆಗಮಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವಂತಹ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಪರವಾಗಿ ಮತಯಾಚನೆ, ೩ಸಾವಿರ ಮಹಿಳೆಯರೊಂದಿಗೆ ನೇರ ಸಂವಾದ ಮಾಡಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಮಾಧ್ಯಮ ವಕ್ತರಾಗಿರುವ ಲಾಡ್ಲೇಮಷಾಕ ದೋಟಿಹಾಳ ಯಲಬುರ್ಗಿ, ಪ್ರಚಾರ ಸಮಿತಿಯ ಅಧ್ಯಕ್ಷ ಶೇಖರಗೌಡ ಮಾಲಿ ಪಾಟೀಲ ಹೇಳಿದರು.
ಪಟ್ಟಣದ ಶಾಸಕ ಬಯ್ಯಾಪುರ ಅವರ ನಿವಾಸದಲ್ಲಿ ಮಾತನಾಡಿದ ಅವರು,ಏ.೨೮ ರಂದು ಮಧ್ಯಾಹ್ನ ೩-೩೦ ಗಂಟೆಗೆ ಹೆಲಿಕ್ಯಾಪ್ಟರ್ ಮೂಲಕ ಆಗಮಿಸಿ ಎಚ್ ಡಿ ಎಫ್ ಸಿ ಬ್ಯಾಂಕಿನಿಂದ ತೆರೆದ ವಾಹನದಲ್ಲಿ ರಾಹುಲ್ ಗಾಂಧಿ ರೋಡ್ ಶೋ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವಂತೆ ಮತದಾರರಲ್ಲಿ ಮತಯಾಚನೆ ನಡೆಸುತ್ತಾರೆ. ಎಚ್ ಡಿ ಎಫ್ ಸಿ ಬ್ಯಾಂಕ್ ನಿಂದ ರೋಡ್ ಶೋ ಕಾರ್ಗಿಲ್ ವೃತ್ತ ಮಾರುತಿ ವೃತ್ತ ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತದ ಮುಖಾಂತರ ತಾವರಗೇರ ರಸ್ತೆಯಲ್ಲಿ ಬರುವಂತಹ ಟಿ.ಎ.ಪಿ.ಎಂ.ಎಸ.ಇ ಸೊಸೈಟಿಗೆ ಸೇರಿದ ಜಾಗದಲ್ಲಿ ಮಹಿಳೆಯರೊಂದಿಗೆ ನೇರ ಸಂವಾದ ನಡೆಸಲಿದ್ದಾರೆ ಎಂದರು.
ಸಂವಾದದಲ್ಲಿ ಪ್ರಚಲಿತ ವಿದ್ಯಮಾನದ ಕುರಿತು ಮತ್ತು ಕಾಂಗ್ರೆಸ್ ಪಕ್ಷದ ಸಾಧನೆಗಳ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವೈಫಲ್ಯತೆ ಬಗ್ಗೆ ಒಂದು ಗಂಟೆಗಳ ಕಾಲ ೩ಸಾವಿರ ಗ್ರಾಮೀಣ ಮಹಿಳೆಯರೊಂದಿಗೆ ಸಂವಾದ ನಡೆಸಿದ ಬಳಿಕ ವಿಜಯನಗರದ ಕಡೆಗೆ ಪ್ರಯಾಣ ಬೆಳೆಸಲಿದ್ದಾರೆ ಎಂದರು.