ಬಿಜೆಪಿ ಏನು ಮಾಡಿದೆ ಎಂಬುದನ್ನು ಅರಿತು, ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಕಾಂಗ್ರೆಸ್ ಆಯ್ಕೆ ಮಾಡಿ

Advertisement

ಹುಬ್ಬಳ್ಳಿ: ನಿಮ್ಮ ಭವಿಷ್ಯ ಚೆನ್ನಾಗಿರಬೇಕು ಎಂದರೆ ಕಾಂಗ್ರೆಸ್ ಆಯ್ಕೆ‌ ಮಾಡಿ. ನಿಮಗೆ ಆಗಿರುವ ಅನುಭವ, ತೊಂದರೆ ನೋಡಿ,ಅರಿತು ಮತ ಚಲಾಯಿಸಿ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದರು.
ಕುಂದಗೋಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಪರ ಬೃಹತ್ ರೋಡ್ ಶೋ ನಡೆಸಿದ ಅವರು ಮಾತನಾಡಿ, ನಿಮಗೆ ಆಗಿರುವ ಅನುಭವದ ಮೇಲೆ ಮತ ನೀಡಿ. ಕಳೆದ ಮೂರು ವರ್ಷ ಕರ್ನಾಟಕ ಬಿಜೆಪಿ ಏನು‌ ಮಾಡಿದೆ ಎಂಬುದು ಅರಿಯಬೇಕು. ಕಾಂಗ್ರೆಸ್ ಪಕ್ಷ ಮನೆ ನಡೆಸುವ ಯಜಮಾನಿಗೆ ೨೦೦೦ ಸಾವಿರ ನೀಡುವ ಯೋಜನೆ ರೂಪಿಸಿದೆ. ೨.೫ ಲಕ್ಷ ಉದ್ಯೋಗ ಖಾಲಿ ಇವೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಉದ್ಯೋಗ ಭರ್ತಿ ಮಾಡಲಿದೆ. ನಿರುದ್ಯೋಗಿಗಳಿಗೆ ೩ ಸಾವಿರ ನೀಡಲಾಗುತ್ತದೆ. ಈ ಚುನಾವಣೆಯಿಂದ ನಿಮ್ಮ ಮಕ್ಕಳ ಭವಿಷ್ಯ ಹಾಗೂ ಕರ್ನಾಟಕದ ಭವಿಷ್ಯ ನಿರ್ಧಾರವಾಗಬೇಕಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದ ತಕ್ಷಣ ಅನ್ನಭಾಗ್ಯ, ಕ್ಷೀರಭಾಗ್ಯ ಮತ್ತೆ ಆರಂಭಿಸುತ್ತೇವೆ ಎಂದರು. ಕುಸುಮಾವತಿ ಶಿವಳ್ಳಿ ಅವರು ಮತ್ತೆ ಗೆಲ್ಲಬೇಕು. ನಿಮ್ಮ ಭವಿಷ್ಯ ಚೆನ್ನಾಗಿರಬೇಕು ಎಂದರೆ ಕಾಂಗ್ರೆಸ್ ಆಯ್ಕೆ‌ ಮಾಡಿ ಎಂದರು.