ವರ್ತೂರು ಪ್ರಕಾಶ್ ಗೆ ಬಂಧನ ಭೀತಿ

ವರ್ತೂರ್‌ ಪ್ರಕಾಶ
Advertisement

ಬೆಂಗಳೂರು: ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲೇ ಕೋಲಾರ ಬಿಜೆಪಿ ಅಭ್ಯರ್ಥಿ ವರ್ತೂರು ಪ್ರಕಾಶ್​ಗೆ ಬಂಧನ ಭೀತಿ ಎದುರಾಗಿದೆ. ಚೆಕ್​ ಬೌನ್ಸ್​ ಪ್ರಕರಣದಲ್ಲಿ ಪ್ರಕಾಶ್​ಗೆ ಬಂಧನ ವಾರಂಟ್​ ಜಾರಿಯಾಗಿದೆ. ವರ್ತೂರು ಪ್ರಕಾಶ್​ಗೆ ಸಾಕಷ್ಟು ಬಾರಿ ಸಮನ್ಸ್ ನೀಡಿದರು ಕೋರ್ಟಿಗೆ ಹಾಜರಾಗಿಲ್ಲ. ಈ ಹಿನ್ನೆಲೆಯಲ್ಲಿ ಆನೇಕಲ್ ಜೆಎಂಎಫ್​ಸಿ ಕೋರ್ಟ್ ಬಂಧನದ ವಾರಂಟ್​ ಜಾರಿ ಮಾಡಿದೆ. ಮೇ 10ನೇ ತಾರೀಖಿನ ವೇಳೆಗೆ ವರ್ತೂರು ಪ್ರಕಾಶ್​ ಅವರನ್ನು ಬಂಧಿಸಿ ಕೋರ್ಟ್ ಮುಂದೆ ಹಾಜರುಪಡಿಸಲು ಜಿಗಣಿ ಪೋಲೀಸರಿಗೆ ನ್ಯಾಯಾಧೀಶರು ತಾಕೀತು ಮಾಡಿದ್ದಾರೆ.