ಸುಳ್ಳು ಸರ್ವೇ ಮಾಡಿಸಿ ದೇಶದ ಜನರಿಗೆ ವಂಚನೆ

Advertisement

ಕಾಂಗ್ರೆಸ್‌ ಸುಳ್ಳು ಸರ್ವೇ ಮಾಡಿಸಿ ದೇಶದ ಜನರನ್ನು ವಂಚನೆ ಮಾಡಿದೆ. ರಾಜ್ಯದಲ್ಲೂ ಸುಳ್ಳು ಸರ್ವೇ ಮಾಡಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು.
ಬಳ್ಳಾರಿಯಲ್ಲಿ ನಡೆದ ಬೃಹತ್‌ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದ ರಾಜನೀತಿಯನ್ನು ಕಾಂಗ್ರೆಸ್‌ ಭ್ರಷ್ಟಗೊಳಿಸಿದೆ. ಭ್ರಷ್ಟಚಾರ ಮಾಡಿ ದೇಶದ ಜನರಿಗೆ ಮೋಸ ಮಾಡಿದೆ ಎಂದರು.
ಭಾಷಣದಲ್ಲಿ ಕೇರಳ ಸ್ಟೋರಿ ಪ್ರಸ್ತಾಪ ಮಾಡಿದ ಮೋದಿ, ಕೇರಳ ಸ್ಟೋರಿ ಬಗ್ಗೆ ಸಾಕಷ್ಟು ಚರ್ಚೆಗಳು ಆಗುತ್ತಿವೆ. ಕಾಂಗ್ರೆಸ್‌ ಭಯೋತ್ಪಾದನೆಗೆ ಬೆಂಬಲ ನೀಡಿದೆ. ಭಯೋತ್ಪಾದನೆಗೆ ಮೃದು ಧೋರಣೆ ತೋರುತ್ತದೆ. ಹೀಗಾಗಿ ಕಾಂಗ್ರೆಸ್‌ ಭಯೋತ್ಪಾದನೆ ಬಗ್ಗೆ ಒಂದೇ ಒಂದು ಮಾತನ್ನೂ ಆಡಲ್ಲ. ಇದು ದೇಶದ ದೌರ್ಭಾಗ್ಯ ಎಂದರು.