ವಿದ್ಯುತ್ ಸ್ಪರ್ಶ: ಮೂವರ ಧಾರಣ ಸಾವು

Advertisement

ಚಿಕ್ಕಮಗಳೂರು: ಗಣಪತಿ ವಿಸರ್ಜಿಸಿ ಬರುವಾಗ ವಿದ್ಯುತ್ ಪ್ರವಹಿಸಿ ಇಬ್ಬರು ಬಾಲಕಿಯರೂ ಸೇರಿದಂತೆ ಮೂವರು ದಾರುಣ ಸಾವನ್ನಪ್ಪಿದ ಘಟನೆ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಬಿ. ಹೊಸಹಳ್ಳಿ ಯಲ್ಲಿ ಕಳೆದ ರಾತ್ರಿ ಸಂಭವಿಸಿದೆ.

ಟ್ರ್ಯಾಕ್ಟರ್ ಅನ್ನು ಸಿಂಗಾರಗೊಳಿಸಿ ನಿರ್ಮಿಸಿದ್ದ ಕಮಾನಿಗೆ ವಿದ್ಯುತ್ ತಂತಿ ಈ ದುರ್ಘಟನೆ ನಡೆದಿದ್ದು, ಘಟನೆಯಲ್ಲಿ ರಾಜು (47) ರಚನಾ (35) ಪಾರ್ವತಿ (26) ಮೃತಪಟ್ಟಿದ್ದಾರೆ, ಗಂಭೀರ ಗಾಯಗೊಂಡ ಆರು ಜನರನ್ನು ಮೂಡಿಗೆರೆ ಆಸ್ಪತ್ರೆಗೆ ದಾಖಲಿಸಲಾಗಿತ್ತು ನಂತರ ಅವರಲ್ಲಿ ಮೂವರನ್ನು ಹಾಸನದ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ರವಾನಿಸಲಾಗಿದೆ,

ಇದರಲ್ಲಿ ಗಂಭೀರ ಗಾಯಗೊಂಡ ಸಂಗೀತ, ಪಲ್ಲವಿ ಸ್ಥಿತಿ ಗಂಭೀರ ಎನ್ನಲಾಗಿದೆ, ಘಟನೆ ವೇಳೆ ಟ್ರಾಕ್ಟರ್ ನ ಇಂಜಿನ್ ಮೇಲೆ ಕೂಳಿತಿದ್ದ ಡ್ರೈವರ್ ಅಪಾಯದಿಂದ ಪಾರಾಗಿದ್ದಾನೆ, ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಸ್ಪಿ ಉಮಾ ಪ್ರಶಾಂತ್ ಮೂಡಿಗೆರೆಗೆ ತೆರಳಿ ಘಟನೆಯ ವರದಿ ಪಡೆದಿದ್ದಾರೆ. ಮೃತರೆಲ್ಲಾ ಕೂಲಿ ಕಾರ್ಮಿಕರು ಎಂದು ತಿಳಿದು ಬಂದಿದ್ದು ಭಾರೀ ಮಳೆ ಸುರಿಯುತ್ತಿದ್ದ ಹಿನ್ನೆಲೆ ವಿದ್ಯುತ್ ಕಂಬದ ವೈರ್ ಗಳು ಸಡಿಲಗೊಂಡ ಕಾರಣ ಟ್ರಾಕ್ಟರ್ ನ ಕಮಾನಿಗೆ ಸಿಲುಕಿರಬಹುದು ಎಂದು ಅಂದಾಜಿಸಲಾಗಿದೆ