ಸಿದ್ದರಾಮಯ್ಯ ರಹಸ್ಯ ಸಭೆ

Advertisement

ದೆಹಲಿ: ಚುನಾವಣಾ ಬಳಿಕ ಕಾಂಗ್ರೆಸ್‌ ಹೈಕಮಾಂಡ್‌ಗೆ ಈಗ ಸಿಎಂ ಆಯ್ಕೆ ಕಗ್ಗಂಟಾಗಿದೆ.
ರಾಜ್ಯದ ಸಿಎಂ ಆಯ್ಕೆ ವಿಚಾರ ಸದ್ಯ ಕಾಂಗ್ರೆಸ್‌ ಹೈಕಮಾಂಡ್‌ ಅಂಗಳಕ್ಕೆ ಹೋಗಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ದೆಹಲಿಗೆ ತೆರಳಿದ್ದಾರೆ. ಆದರೆ ಹೈಕಮಾಂಡ್‌ ಬಳಿ ತೆರಳುವ ಮುನ್ನ ಸಿದ್ದು ತಮ್ಮ ಆಪ್ತರ ಜತೆ ರಹಸ್ಯ ಸಭೆ ನಡೆಸಿದ್ದಾರೆ.
ಸಿದ್ದರಾಮಯ್ಯ, ಕೆ.ಜೆ. ಜಾರ್ಜ್‌, ಜಮೀರ್‌ ಅಹ್ಮದ್‌, ಎಂ.ಬಿ. ಭೈರತಿ ಸುರೇಶ ಮತ್ತು ಯತೀಂದ್ರ ಜತೆಗೂಡಿ ದೆಹಲಿಯಲ್ಲಿ ರಹಸ್ಯ ಸಭೆ ನಡೆಸಿದ್ದಾರೆ.