ರೈಲು ದುರಂತದಲ್ಲಿ ಕನ್ನಡಿಗರು ಸೇಫ್‌: ಲಾಡ್

ಲಾಡ್
Advertisement

ಬೆಂಗಳೂರು: ಒಡಿಶಾ ರೈಲು ದುರಂತದಲ್ಲಿ ಕನ್ನಡಿಗರಿಗೆ ತೊಂದರೆಯಾಗಿಲ್ಲ ಎಲ್ಲರೂ ಸೇಫ್‌ ಆಗಿದ್ದಾರೆ ಎಂದು ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.
ಈಗಾಗಲೇ ಒಡಿಶಾದಲ್ಲಿನ ಶವಾಗಾರ, ಆಸ್ಪತ್ರೆಗಳಿಗೆ ಭೇಟಿ ನೀಡಿ ಅಲ್ಲಿನ ಕನ್ನಡಿಗರಿದ್ದಾರೆಯೇ ಎನ್ನುವುದಾಗಿ ನೋಡಿದ್ದೇನೆ. ಗಾಯಾಳುಗಳನ್ನು ಮಾತನಾಡಿಸಿದ್ದೇನೆ. 750 ಗಾಯಾಳುಗಳಲ್ಲಿ ಯಾರೂ ಕನ್ನಡಿಗರು ಇಲ್ಲ ಎಂದು ತಿಳಿಸಿದ್ದಾರೆ.