ಸದನದಲ್ಲಿ ಪ್ರವಾಹ ಪ್ರಸ್ತಾಪಕ್ಕೆ ಕಾಂಗ್ರೆಸ್ ಸಜ್ಜು​..!

Advertisement

ಬೆಂಗಳೂರು: ಬೆಂಗಳೂರಿನ ಪ್ರವಾಹ ಪ್ರಸ್ತಾಪಕ್ಕೆ ಕಾಂಗ್ರೆಸ್​ ಸಜ್ಜಾಗಿದ್ದು, ಸದನದಲ್ಲಿ ಒತ್ತುವರಿ ಕದನ ಗ್ಯಾರೆಂಟಿನಾ..?ಸೋಮವಾರದಿಂದ ಒತ್ತುವರಿ ಫೈಟ್​ ನಡೆಯುತ್ತಾ..?ಮಹಾ ಮಳೆಗೆ ಪೂರ್ವ ಬೆಂಗಳೂರು ಮುಳುಗಿತ್ತು, ರಾಜಕಾಲುವೆ ಒತ್ತುವರಿಯೇ ಇದ್ಕೆಲ್ಲಾ ಕಾರಣ, ಬಿಜೆಪಿ ಸರ್ಕಾರ ಒತ್ತುವರಿ ತೆರವು ಮಾಡಿಲ್ಲ ಎಂದು ಕಾಂಗ್ರೆಸ್​ ಆರೋಪ ಮಾಡಿದೆ. ಒತ್ತುವರಿ ಮಾಡಿರೋದೇ ಕಾಂಗ್ರೆಸ್​ ನಾಯಕರು ಎಂದಿದ್ದ ಬಿಜೆಪಿ, ಒತ್ತುವರಿ ಪ್ರಸ್ತಾಪ ಮಾಡಿದ್ರೆ ಕಾಂಗ್ರೆಸ್​ ಮೇಲೆ ಮುಗಿ ಬೀಳಲಿದೆ . ಸಿದ್ದರಾಮಯ್ಯ ರಾಜಕಾಲುವೆಗಳ ಒತ್ತುವರಿ ತೆರವು ಮಾಡಿಲ್ಲ ಎಂದಿದ್ದಾರೆ. ಮಹದೇವಪುರ, ಬೊಮ್ಮನಹಳ್ಳಿ,ಕೆ.ಆರ್.ಪುರದಲ್ಲಿ ಒತ್ತುವರಿ ಹೆಚ್ಚಾಗಿದೆ, ಸಿದ್ದು ಸರ್ಕಾರದ ವಿರುದ್ಧ ಒತ್ತುವರಿ ಅಸ್ತ್ರ ಬೀಸಲು ಸಜ್ಜಾಗಿದ್ದು, ಒತ್ತುವರಿ ಹಿಂದೆ ಯಾರಿದ್ದಾರೆ ಹೇಳೋಕೆ ನಾವ್​ ರೆಡಿ ಎನ್ನುತ್ತಿದೆ ಬಿಜೆಪಿ.